Monday, August 16, 2010

Kavalu - A Reflection of Unsettled Life - Review by Bedre Manjunath in Karmaveera 22 Aug 2010



Kavalu - A Reflection of Unsettled Life
Review by Bedre Manjunath in Karmaveera 22 Aug 2010

ಕವಲು - ಸಮಾಜೋ-ಆಥರ್ಿಕ-ಸಾಂಸ್ಕೃತಿಕ-ಕೃತಿಕೇಂದ್ರಿತ-ಪ್ರಸ್ತುತ ವಿಮಶರ್ಾ ನೋಟ

ಕಾದಂಬರಿ : ಕವಲು
ಕಾದಂಬರಿಕಾರರು : ಎಸ್. ಎಲ್. ಭೈರಪ್ಪ
ಪ್ರಕಾಶಕರು : ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು.
ಪುಟಗಳು : 304 ಬೆಲೆ : 250
ಆವೃತ್ತಿ : 2010 ಜೂನ್ (ಹದಿನೈದೇ ದಿನಗಳಲ್ಲಿ 6 ಆವೃತ್ತಿಗಳು!)

'ಐ ವಾಂಟ್ ಟು ಟಾಕ್ ಟು ಯು' ಎಂದು ಕಾಲುಕೆರೆದು ನಿಲ್ಲುವ, 'ತಿಳುಕ' ಎಂದು ತೀಮರ್ಾನ ನೀಡುವ ಪಾತ್ರಗಳ ಅಸಂಗತ ಸಾಂಗತ್ಯದ ಭೈರಪ್ಪನವರ 'ಕವಲು' ವಿನಾಕಾರಣ ಟೀಕೆಗೊಳಗಾಗುತ್ತಿದೆ. ಬದಲಾದ ಮತ್ತು ನಿರಂತರ ಸ್ಥಿತ್ಯಂತರಗೊಳ್ಳುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಕಲಾಕೃತಿಯಾಗಿಸಿ, ತಿದ್ದಿ ತೀಡಿ ವಣರ್ಿಸಲು ಪ್ರಯತ್ನಿಸದೇ ಕೇವಲ ಕನ್ನಡಿ ಹಿಡಿದು ತೋರಿಸುತ್ತಿರುವುದೇ 'ಕವಲು' ಕಾದಂಬರಿಯ ವಿಶೇಷತೆಯಾಗಿದ್ದು 'ಇದ್ದದ್ದು ಇದ್ಹಂಗೆ ಹೇಳಿದ್ರೆ ಎದ್ ಬಂದು ಎದೆಗೇ ಒದ್ರಂತೆ' ಎನ್ನುವವರೇ ಜಾಸ್ತಿಯಾಗಿದ್ದಾರೆ. 'ಯಾವ ಯಾವ ಜೀವಂತ ಅಥವಾ ಭೂಗತ ವ್ಯಕ್ತಿಗಳತ್ತ ಕನ್ನಡಿ ಹಿಡಿದಿದ್ದೀರಿ?' ಎಂದು ಭೈರಪ್ಪನವರನ್ನೇನು ಕೇಳುವ ಅಗತ್ಯವಿಲ್ಲ. ಹಲವು ರಾಜಕಾರಣಿಗಳ, ಮುಖಂಡರ, ಗೋಮುಖ ವ್ಯಾಘ್ರಗಳ ಕಾಮಕಾಂಡಗಳನ್ನು ಈಗಾಗಲೇ ಓದಿದವರಿಗೆ ಪಾತ್ರಗಳ ಹೆಸರುಗಳು ಥಟ್ಟಂತ ಹೊಳೆದುಬಿಡುತ್ತವೆ. ಉದಾಹರಣೆಗೆ ಕೆಲವೇ ಕಾಲ ವಿದ್ಯಾಮಂತ್ರಿಯಾಗಿದ್ದ ರಸಿಕ ಪಾತ್ರ. ಹೆಸರಿನಲ್ಲೇ ಗುರುತಿಸಿಕೊಂಡುಬಿಟ್ಟಿದೆ!
ಒಂದು ಕಾದಂಬರಿಯನ್ನು ಅದು ಇರುವಂತೆಯೇ ಸ್ವೀಕರಿಸುವುದನ್ನು ಬಿಟ್ಟು, 'ಅದು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಹಾಗೆ ಹೇಳಿದ್ದರಿಂದ ಎಲ್ಲೆಲ್ಲಿಯೋ ಚಿವುಟಿದಂತಾಗಿದೆ, ಇವರ ಪಾತ್ರಗಳು ಬರೀ ಸ್ತ್ರೀವಾದ ವಿರೋಧಿಯಾಗಿ, ಸನಾತನ ಸಂಸ್ಕೃತಿಯ ಪೋಷಕವಾಗಿ ಮಾತನಾಡುತ್ತಿವೆ, ಹಾದರದ ಅನಾವಶ್ಯಕ ವೈಭವೀಕರಣ ಹೈ ಸೊಸೈಟಿಯ ಪ್ರತೀಕವಾಗಿದೆ, ಹಾಗೆ, ಹೀಗೆ' ಎಂದು ಹೀಗಳೆಯುತ್ತಿರುವ ವಿದ್ಯಾಪರ್ವತಗಳ ದಂತಗೋಪುರದ ವಿಮರ್ಶಕರು ಯತಾರ್ಥವನ್ನು ಗ್ರಹಿಸಲು ಸೋಲುತ್ತಿದ್ದಾರೆ ಅಥವಾ ಗ್ರಹಿಸಿದ್ದರೂ ಹಾಗೆಂದು ಹೇಳಿಬಿಟ್ಟರೆ ತಮ್ಮ ಬಂಡವಾಳವೆಲ್ಲಿ ಬಯಲಿಗೆ ಬರುತ್ತದೋ ಎಂದು ತೋರಿಕೆಯ ಪ್ರತಿಭಟನೆಗಿಳಿದಿದ್ದಾರೆ.
ಪಾಶ್ಚಾತ್ಯ ಕಾದಂಬರಿಗಳು, ಅದರಲ್ಲೂ ಥ್ರಿಲ್ಲರ್ಗಳು ಬೆಸ್ಟ್ ಸೆಲ್ಲರ್ಗಳಾದಾಗ ಮತ್ತು ಅವುಗಳನ್ನು ಆಧರಿಸಿದ ಚಲನಚಿತ್ರಗಳು ತೆರೆಗೆ ಬಂದಾಗ ಅಲ್ಲಿ ಕಾಣುವುದು ಸಾಫಿಸ್ಟಿಕೇಟೆಡ್ ಡಿಬಾಚರಿ. ಜೇಮ್ಸ್ಬಾಂಡ್ ಪಾತ್ರದ ಸುತ್ತ ಅದೆಷ್ಟುಬಾರಿ ಇದು ಪುನಾವರ್ತನೆಯಾಗುತ್ತದೆ ಎನ್ನುವುದು ಯಾವುದೇ ಮುಜುಗರವಿಲ್ಲದೇ ಜಗಜ್ಜಾಹೀರಾಗಿದೆ. ಇತ್ತೀಚಿನ ಕಾಪರ್ೊರೆಟ್ ಜಗತ್ತಿನಲ್ಲಿ ಸೆಕ್ರೆಟರಿಗಳಾಗಿ ನೇಮಕವಾಗುವವರು 'ಬಾಸ್' ಹೇಳುವ ಯಾವುದೇ ಕೆಲಸಕ್ಕೂ ಸೈ ಎನ್ನಬೇಕು ಮತ್ತು ಅದರ ಮೂಲಕವೇ ಬ್ಯುಸಿನೆಸ್ ಕುದುರಿಸಬೇಕು ಕೂಡ. 'ಎ ಸೂಟಬಲ್ ಬಾಯ್' ಎಂಬ ಸಾಧಾರಣ ಕಾದಂಬರಿ ವಿಶ್ವಮಟ್ಟದಲ್ಲಿ ಮಾರುಕಟ್ಟೆ ಆಕ್ರಮಿಸಲು ಕಾಮಿನಿಯರ ಸಹಾಯ ಪಡೆಯಲಾಗಿತ್ತು ಎಂಬ ಟೀಕೆಯಲ್ಲಿ ಹೊಸದೇನೂ ಇಲ್ಲ. ಪಾಶ್ಚಾತ್ಯ ದೇಶಗಳೇಕೆ, ನಮ್ಮ ಬೆಂಗಳೂರಿನ ಕೆಲವು ಕಛೇರಿಗಳ ಆಂಟೆ ಛೇಂಬರ್ಗಳ ಪೀಠೋಪಕರಣಗಳು ನಡುಮಧ್ಯಾಹ್ನದ ಹೊತ್ತಿನಲ್ಲೇ ಕಿರುಗುಟ್ಟುವ ಸದ್ದುಹೊರಡಿಸುವುದು ಅಲ್ಲಿನ ಪ್ಯೂನ್ಗಳಿಗೆ ಮಾತ್ರವಲ್ಲದೇ ಹೊರಗಿನವರಿಗೂ ತಿಳಿದಿರುವ ಬಹಿರಂಗ ರಹಸ್ಯ! ಬ್ರೌಸಿಂಗ್ ಸೆಂಟರ್ಗಳಲ್ಲಿ 'ಸವಿತಾ ಭಾಭಿ' ಎಂದು ಹೇಳಿದರೆ ಅರ್ಥವಾಗದೇ ಇರುವವರು, ಕಾಪರ್ೊರೇಟ್ ಸೆಕ್ಸ್ ಸೈಟ್ ಗೊತ್ತಿಲ್ಲದವರು, ಬ್ಲೋಜಾಬ್ಗೆ ಡಿಕ್ಷನರಿಗಳಲ್ಲಿ ಅರ್ಥಹುಡುಕುವವರು ನಿಜಕ್ಕೂ ಮೂರ್ಖರೇ!
'ಕವಲು' ಶುಂಠಿಯ ಬೇರಿನಂತೆ ಎತ್ತೆತ್ತೆತ್ತಲೋ ಕರೆದೊಯ್ಯುತ್ತದೆ ನಿಜ. ಆದರೂ ಅದಕ್ಕೊಂದು ಬಂಧ, ಬಿಗಿ, ಹಂದರವಿದೆ. ಅದರ ಪೋಷಣೆಗೆ ಆಥರ್ಿಕ ಪರಿಸರ, ಸಾಮಾಜಿಕ ಬದ್ಧತೆ, ಯಶಸ್ಸಿನ ತಂತ್ರಗಾರಿಕೆ, ಶ್ರಮಜೀವನದ ಸಾರ್ಥಕತೆಯ ಜೀವದ್ರವ್ಯವೂ ಇದೆ. ಹಾದರದ ನಿರೂಪಣೆ ಪ್ರಕ್ಷಿಪ್ತವಷ್ಟೇ! ಎರಡು ಕುಟುಂಬಗಳ ಕಥೆ ಎಂದೆನಿಸಿದರೂ ಅವುಗಳ ಸುತ್ತಲೇ ಇರುವ ಇನ್ನೂ ಕೆಲವರ ಅತಂತ್ರ ಬದುಕಿನ ಚಿತ್ರಗಳು ಅದೇಕೋ ಬಹುತೇಕ ವಿಮರ್ಶಕರಿಗೆ ಕಾಣಿಸುತ್ತಲೇ ಇಲ್ಲ. ಕುಸುರಿ ಕೆಲಸಗಾರ ಸಣ್ಣಪುಟ್ಟ ವಿವರಗಳನ್ನೂ ಸ್ಫುಟಗೊಳಿಸುತ್ತಾನೆ. ಭೈರಪ್ಪನವರು ಕೂಡ ಅದು ಎಷ್ಟೇ ಚಿಕ್ಕ ಪುಟ್ಟ ಪಾತ್ರವಿದ್ದರೂ ಅವುಗಳಿಗೆ ಜೀವತುಂಬಿ, ಅವು ಇರುವಷ್ಟು ಹೊತ್ತು ಅವುಗಳದ್ದೇ ಪರಿಸರದ ಘಮಘಮಿಸುವಿಕೆಯನ್ನು ಸೃಷ್ಟಿಸಿ, ಅಲ್ಲೇ ಮರೆಯಾಗುವ ನಿತ್ಯಪುಷ್ಪಗಳಾಗಿಸುತ್ತಾರೆ. ಅದನ್ನು ಕುರಿತಂತೆ ಯಾರೂ ಗಮನಿಸದಿರುವುದು ಭೈರಪ್ಪನವರಿಗೆ ಬೇಸರ ತರಿಸಿರಬಹುದು. ದೊಡ್ಡ ಕ್ಯಾನ್ವಾಸಿನ ಚಿತ್ರದಲ್ಲಿ ತುಂಬದೇ ಬಿಟ್ಟ ಭಾಗಗಳೇ ಜಾಸ್ತಿ ಎನಿಸಿದರೂ ಆ ರಿಕ್ತತೆಯೇ ಒಂದು ಅರ್ಥ ಒದಗಿಸುವಂತೆ ಹೇಳದೇ ಬಿಟ್ಟ ಮಾತುಗಳಲ್ಲೇ ಕಥೆ ಬೆಳೆಯುತ್ತಾ ಸಾಗುವುದು ಸೋಜಿಗವೇನೂ ಅಲ್ಲ. ಮೌನವೇ ಮಾತಿಗಿಂತ ಹೆಚ್ಚು ಅರ್ಥಕೊಡುವ ಸನ್ನಿವೇಶಗಳನ್ನು, ಸೂಕ್ಷ್ಮತೆಗಳನ್ನು ಕಥನಕಾರನ ದೃಷ್ಟಿಯಿಂದ ನೋಡಿದಾಗ ಪಾತ್ರಗಳ ಮನೋಭೂಮಿಕೆ ಎಂತಹುದೆಂಬುದು ತಿಳಿಯುತ್ತದೆ. ವಿಮರ್ಶಕನೂ ಕೃತಿಕಾರನ ಬೂಟುಗಳಲ್ಲಿ ತನ್ನ ಪಾದಗಳನ್ನು ಊರಿದಾಗ ಮಾತ್ರ ಆತನ ವಿಮಶರ್ೆಗೊಂದು ಅರ್ಥಬಂದೀತು. ಅದನ್ನು ಬಿಟ್ಟು ಕೂರಂಬುಗಳಂತಹ ಮಾತುಗಳಿಂದ ಚುಚ್ಚಿ, ಯಾವುದೋ ಪಂಥಕ್ಕೆ ಕಟ್ಟಿಹಾಕಿಸುವ ಹುನ್ನಾರ ಏನನ್ನೂ ಸಾಧಿಸಲಾರದು.
ಕಥೆಗಾರ ತನ್ನ ಮನೋಲಹರಿ ಬಂದಂತೆ ಏನನ್ನೋ ಒಂದಷ್ಟು ಕಲ್ಪಿಸಿ, ಕಥಾಹಂದರಕ್ಕಿಳಿಸಿ, ಸೂಕ್ತ ಮಾಧ್ಯಮದ ಮೂಲಕ ಪ್ರಕಟಿಸುವುದು ಸಾಮಾನ್ಯ. ಜನಮೆಚ್ಚುವಂತೆಯೇ ಬರೆಯಬೇಕೆಂಬ ಹಪಾಹಪಿಗೆ ಇಳಿದವರ ಯಶಸ್ಸು ಬಹಳಕಾಲ ಬಾಳದು. ತನ್ನ ಇಷ್ಟದ ರುಚಿಗಟ್ಟಿನ ತಿನಿಸನ್ನು ಉಣಬಡಿಸುವವನಿಗೆ ಯಾವಾಗಲೂ ಡಿಮ್ಯಾಂಡ್ ಇದ್ದದ್ದೇ. ಯಶಸ್ಸಿನ ಏರಿಳಿತದಲ್ಲಿ ಗಟ್ಟಿ ಸರಕು ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುತ್ತದೆ. ಮಂಗಳೆ-ಜಯಕುಮಾರ್, ಇಳಾ-ವಿನಯ್ ಸಂಬಂಧಗಳ ಹಿಂದಿನ ಮತ್ತು ಮುಂದಿನ ಘಟನೆಗಳತ್ತಲೇ ಸುತ್ತಿಕೊಂಡಿರುವಂತೆ ತೋರುವ 'ಕವಲು' ಇವೇ ಸಂಬಂಧಗಳ ಕವಲುಗಳಲ್ಲೇ ಸಾಗುತ್ತಾ, ಅಲ್ಲಲ್ಲಿ ಮಿಂಚುವ ಮಾನವೀಯ ಎಳೆಗಳು, ತೋರಿಬರುವ ಭಯಾನಕ ಮುಖಗಳು, ಭೀಬತ್ಸ ದೃಶ್ಯಗಳು, ಸ್ವಾರ್ಥಸಾಧನೆಯೊಂದೇ ಗುರಿ ಎಂದು ಒದರಾಡುವ ಪಕ್ಷಪಾತಿಗಳು, ಮನೋರೋಗಿಗಳಂತೆನಿಸುವ ಎಡಬಡಂಗಿಗಳು, ಜೀವಕಳೆಯೇ ಇಲ್ಲದ ಕೀಲುಗೊಂಬೆಗಳು, ಮಹಾನಗರದಲ್ಲಿನ ದಿಬ್ಬಣದ ದೃಶ್ಯದಂತೆ ಸಾಗಿಹೋಗಿ ಮನರಂಜಿಸಿ ಮರೆಯಾಗಿಬಿಡುತ್ತವೆ. ಪಾತ್ರದ ತುಮುಲವನ್ನು ಅದರ ಭಾಷೆಯಲ್ಲಿಯೇ ವ್ಯಕ್ತಮಾಡುವುದು ಕಾದಂಬರಿಕಾರನ ಪ್ರಬದ್ಧತೆಗೆ ಸಾಕ್ಷಿಯಾಗುತ್ತದೆ. ಗಾಢವಾಗಿ ಕಾಡಲೇಬೇಕೆಂಬ ಮಾನವೀಯ ಪಾತ್ರಗಳ ಸೃಷ್ಟಿ ನಿಜಕ್ಕೂ ಕಷ್ಟವೇ. ಉರಿವ ಮನೆಯ ಗಳ ಹಿರಿಯುವ ಪೋಲೀಸ್, ವಕೀಲೆ, ಫ್ಯಾಕ್ಟರಿ ಕೆಲಸಗಾರರು, ಮಂಗಳೆ ಎಲ್ಲರೂ ಸ್ವಾಥರ್ಿಗಳೇ ಆದರೂ ಅವರಿಗೆ ಅದು ಅನಿವಾರ್ಯ. ಬೇರೆ ದಾರಿ ಏನಿತ್ತು ಅಲ್ಲಿ?
ಭೈರಪ್ಪನವರ ಇತರೆ ಕಾದಂಬರಿಗಳ ಹಿನ್ನೆಲೆಯಲ್ಲಿ, ಇತರೆ ಪಾತ್ರಗಳ ಬೆಳಕಿನಲ್ಲಿ 'ಕವಲು' ಕಾದಂಬರಿಯನ್ನು ನೋಡುವುದು ಸೂಕ್ತವಲ್ಲ. ಭೈರಪ್ಪನವರು ಕಾಲದೊಂದಿಗೇ ಮಾಗಿದ್ದಾರೆ. ಏಳುಬೀಳುಗಳನ್ನು ಕಂಡಿದ್ದಾರೆ. ಅವರ ಕೃತಿಯನ್ನು ಅವರ ವ್ಯಕ್ತಿತ್ವದ ಭಾಗವಾಗಿಯೋ, ನೆರಳಾಗಿಯೋ ನೋಡುವುದು, ಕೃತಿಕಾರನ ಯೋಚನೆಗಳೊಟ್ಟಿಗೇ ತುಲನೆಮಾಡುವುದು ಕೃತಿಗೆ ಮಾಡುವ ಅನ್ಯಾಯ. ಈಗಿನ ಸಮಾಜೋ-ಆಥರ್ಿಕ-ಸಾಂಸ್ಕೃತಿಕ ಪರಿಸರದಲ್ಲಿ ಹಳೆಯದೆಲ್ಲವನ್ನೂ ಬಿಟ್ಟ ಪ್ರಸ್ತುತ ಕೃತಿಕೇಂದ್ರಿತವಾದ ವಿಮಶರ್ೆ ಮಾತ್ರ ಯಾವುದೇ ಕೃತಿಗೆ ಕಾವ್ಯ ನ್ಯಾಯ ಒದಗಿಸಬಲ್ಲುದು. ಸಾಹಿತ್ಯ ಅಭ್ಯಾಸಿಗಳಿಗೆ 'ಪ್ರಾಯೋಗಿಕ ವಿಮಶರ್ೆಗೆ ಒದಗಿಸುವ ಕೃತಿಯಂತೆ' ಲೇಖಕನ ಹೆಸರಿನ ಹಂಗಿಲ್ಲದೇ, ಪೂವರ್ಾಗ್ರಹದ ಛಾಯೆಯಿಲ್ಲದೇ, ಶುದ್ಧ ಕೃತಿ ಕೇಂದ್ರಿತ ವಿಮಶರ್ೆ ಯಾವಾಗ ಬರುತ್ತದೆಯೋ ಆಗ ಲೇಖಕನ ಸೃಜನಶೀಲತೆಗೆ ಕಿರೀಟ ದೊರೆತೀತು. ಕೃತಿಕಾರನ ನೆರಳೇ ಗಾಢವಾಗಿ ಕೃತಿಯ ಮೇಲೆ ಬೀಳಿಸುವ, ಬೆಚ್ಚಿ ಬೀಳುವಂತೆ ವತರ್ಿಸುವ ವಿಮರ್ಶಕರಿಂದ ಕೃತಿಯ ವಿಮೋಚನೆ ಸಾಧ್ಯವಾಗುವ ದಿನಕ್ಕಾಗಿ ಎದುರುನೋಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಭೈರಪ್ಪನವರ 'ಕವಲು' ಕಾದಂಬರಿಯನ್ನು ಕೇವಲ ಒಂದು ಕೃತಿ ಮಾತ್ರವಾಗಿ ಓದುವ ಮನಸ್ಥಿತಿಯವರು ಮಾತ್ರ ಅದನ್ನು ನಿಜವಾಗಿ ಅನುಭವಿಸಬಲ್ಲರು. ಅದರಲ್ಲಿನ ತುಮುಲ, ಸಂಚಲನೆಯನ್ನು ಅರ್ಥಮಾಡಿಕೊಳ್ಳಬಲ್ಲರು.
ಪ್ರಸ್ತುತ ಸಮಾಜದಲ್ಲೊಂದು ಸಂಚಲನವುಂಟುಮಾಡಿರುವ 'ಕವಲು' ಭೈರಪ್ಪನವರಿಗೆ ಇನ್ನಷ್ಟು ಕಸುವು ನೀಡಿ ಪ್ರಖರ ಕೃತಿಗಳನ್ನು ಬರೆಯಲು ಉತ್ಸಾಹತುಂಬಲಿ ಎಂದು ಹಾರೈಸೋಣ.


ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089


No comments: