Tuesday, June 26, 2012

Karnataka Sangathi Handbook to be Revised - Letter in Prajavani 26 June 12

Karnataka Sangathi Handbook to be Revised - Letter in Prajavani 26 June 12

logo

 

 

ಕರ್ನಾಟಕ ಸಂಗಾತಿ ಪರಿಷ್ಕಾರಗೊಳ್ಳಲಿ

 
 
  • June 26, 2012
  • Share  
  • [-]
  • Text
  • [+]

ಕನ್ನಡ ಪುಸ್ತಕ ಪ್ರಾಧಿಕಾರವು 2002ರಲ್ಲಿ  ಪ್ರೊ ಚಿ. ಶ್ರಿನಿವಾಸರಾಜು ಮತ್ತು ಬಸವರಾಜ ಕಲ್ಗುಡಿ ಅವರು ಸಂಪಾದಿಸಿದ  `ಕರ್ನಾಟಕ ಸಂಗಾತಿ` ಸಾಮಾನ್ಯ ಜ್ಞಾನ ಕೈಪಿಡಿಯನ್ನು ಪ್ರಕಟಿಸಿತ್ತು. 2005ರಲ್ಲಿ ಅದೇ ಕೃತಿಯ ಮರುಮುದ್ರಣವೂ ಆಗಿತ್ತು. ಇದೀಗ ಮತ್ತೊಮ್ಮೆ ಮರುಮುದ್ರಣಕ್ಕಾಗಿ ಟೆಂಡರ್ ಕರೆದಿದೆ.

2011ರ ಜನಗಣತಿ ಆಧರಿಸಿದ, ತೀರಾ ಇತ್ತೀಚಿನ ಘಟನಾವಳಿಗಳು, ಯೋಜನೆಗಳು ಮತ್ತು ಅಭಿವೃದ್ಧಿಯ ಮಾಹಿತಿಯನ್ನು ಒಳಗೊಂಡಂತೆ ಹೊಸದಾಗಿ ಈ  ಕರ್ನಾಟಕ ಸಂಗಾತಿ  ಪರಿಷ್ಕಾರಗೊಳ್ಳಬೇಕಿದೆ.  ಹಾಗೆ ಮಾಡದೆ ಸುಮ್ಮನೇ ಹಳೆಯ ಸರಕನ್ನೇ ಮರುಮುದ್ರಿಸುವುದರಿಂದ ಯಾವುದೇ ಲಾಭ ಆಗಲಾರದು.  ಮರುಮುದ್ರಣಗಳು ಅಪ್‌ಡೇಟ್ ಆಗದೇ ಇದ್ದರೆ ಮೂಲೆ ಸೇರುವುದು ಖಚಿತ. 

ಈ ಹಳಸಲು ಸರಕಿಗೆ ಬದಲಾಗಿ ಈಗಾಗಲೇ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಪ್ರಕಟಿಸಿರುವ ಕರ್ನಾಟಕ ಕೈಪಿಡಿ 2012 ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಡಿವಿಡಿ ಸಹಿತ ಅತ್ಯುತ್ತಮ ಮಾಹಿತಿಯ ಆಗರವಾಗಿದೆ.  ಅದಕ್ಕೇ ಇನ್ನಷ್ಟು ರಿಯಾಯಿತಿ ದೊರೆಯುವಂತೆ ಮಾಡಿದಲ್ಲಿ ಬಹುತೇಕ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ.

Monday, March 26, 2012

Gedde Gelluvevu - We Will Win - A Handbook on Career Guidance and Personality Development by Bedre Manjunath in Prajavani 26 March 2012



ಮಾರ್ಗದರ್ಶಿ ಕೈಪಿಡಿ

  •  
  • March 26, 2012
  • Share  
  • [-]
  • Text
  • [+]

ಪ್ರೌಢ ಶಿಕ್ಷಣ, ಪಿಯು ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂಥವರಿಗೆ ಪೋಷಕರೊ ಅಥವಾ ಹಿರಿಯ ವಿದ್ಯಾರ್ಥಿಗಳೊ ಮಾರ್ಗದರ್ಶನ ಮಾಡುತ್ತಾರೆ. ಆದರೂ `ನಾನು ಆಯ್ಕೆ ಮಾಡಿಕೊಂಡ ಕೋರ್ಸ್ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆಯೊ ಇಲ್ಲವೊ? 

ಕೈತುಂಬ ಹಣ ಸಿಗುವ ಉದ್ಯೋಗ ಸಿಗುತ್ತದೆಯೋ ಇಲ್ಲವೊ?` ಇತ್ಯಾದಿ ಪ್ರಶ್ನೆಗಳು ಹಲವರ ಮನದಲ್ಲಿ ಮೂಡುತ್ತವೆ. ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬೇದ್ರೆ ಮಂಜುನಾಥ್ ಅವರು ಬರೆದಿರುವ `ಗೆದ್ದೇ ಗೆಲ್ಲುವೆವು` ಕೃತಿ ಮಾರ್ಗದರ್ಶಿ ಕೈಪಿಡಿಯಾಗಿದೆ.

114 ಅಧ್ಯಾಯಗಳ `ಗೆದ್ದೇ ಗೆಲ್ಲುವೆವು` ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡ, ವೃತ್ತಿ ಹುಡುಕಾಟದಲ್ಲಿರುವ ವಿದ್ಯಾರ್ಥಿಗಳ ಹಾಗೂ ಹೊಸ ಹೊಸ ಕೋರ್ಸ್‌ಗಳ ಮಾಹಿತಿ ಹೊತ್ತಿಗೆ. ಐಎಎಸ್, ಕೆಎಎಸ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕ್ರಮ... ಹೀಗೆ ಹತ್ತು ಹಲವು ಅನುಮಾನಗಳಿಗೆ ಉತ್ತರ ರೂಪವಾಗಿ ಪುಸ್ತಕ ರೂಪುಗೊಂಡಿದೆ.

ಸಂದರ್ಶನ ಎದುರಿಸಲಾಗದೆ ಅದೆಷ್ಟೋ ವಿದ್ಯಾರ್ಥಿಗಳು ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಬುದ್ಧಿವಂತರಾಗಿದ್ದರೂ ಸಂದರ್ಶಕರ ಎದುರು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಾರೆ. ಇಂಥ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪದಂತೆ ಅಧ್ಯಾಯ ಒಂದರಲ್ಲಿ ಮಂಜುನಾಥ್ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.

ಸರ್ಕಾರ, ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಅಂತರ್ಜಾಲ ತಾಣ, ವೆಬ್‌ಸೈಟ್ ವಿಳಾಸಗಳನ್ನು ಆಯಾ ಅಧ್ಯಾಯಗಳಲ್ಲಿ ನಮೂದಿಸಿದ್ದಾರೆ. 

ಹೊಸ ಹೊಸ ವೃತ್ತಿ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಈ ರೀತಿಯ ಕೃತಿಗಳ ಸೇರ್ಪಡೆ ಪ್ರಸ್ತುತವಿದೆ. ಈ ನಿಟ್ಟಿನಲ್ಲಿ ಮಂಜುನಾಥ ಅವರ ಪ್ರಯತ್ನ ಉಪಯುಕ್ತ ಪುಸ್ತಕ.
Thank You Editors
Gedde Gelluvevu - We Will Win - A Handbook on Career Guidance and Personality Development by  Bedre Manjunath in Prajavani 26 March 2012
http://prajavani.net/include/story.php?news=7399&section=129&menuid=13

Tuesday, March 20, 2012

Adventure - A Children's Novel on Outward Bound Education in Kannada by Bedre Manjunath


Adventure - A Children's Novel on Outward Bound Education in Kannada by Bedre Manjunath
Published by Shikhara Sahitya, CCB-15, 2nd Cross, Angol Mal, Belagavi (Belagaum)
Pages 128 (Royal Size) - Price: 130/-