Sunday, September 5, 2010

Muzhe Chand Chahiye - Nanage Chandra Beku -Novel by Surendra Verma - Review in Prajavani 5 Sept 2010




Muzhe Chand Chahiye - Nanage Chandra Beku
Novel by Surendra Verma -
Review in Prajavani 5 Sept 2010
Thank you Editor


ಅಸಾಮಾನ್ಯ ರಂಗನಾಯಕಿಯ ಕಥೆ

ಯಾಜ್ಞವಲ್ಕ್ಯ



1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಎಚ್.ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ


ಸುರೇಂದ್ರ ವರ್ಮಾ ಹಿಂದಿಯ ಜನಪ್ರಿಯ ನಾಟಕಕಾರ, ಲೇಖಕ. ಸೆಪ್ಟೆಂಬರ್ 7 ಅವರ ಎಪ್ಪತ್ತನೇ ಹುಟ್ಟುಹಬ್ಬ (ಜನನ: 1941).
ನನಗೆ ಚಂದ್ರ ಬೇಕು
ಹಿಂದಿ ಮೂಲ: ಸುರೇಂದ್ರ ವರ್ಮಾ
ಕನ್ನಡಕ್ಕೆ: ಎಚ್.ಎಸ್. ಪಾರ್ವತಿ
ಪು: 636; ಬೆ: ರೂ. 350
ಪ್ರ: ಸಾಹಿತ್ಯ ಅಕಾದೆಮಿ, ನವದೆಹಲಿ
ಸೆಲ್ಯುಲಾಯ್ಡನ ಮಾಂತ್ರಿಕ ದೀಪದಡಿಯಲ್ಲಿ ರಂಗಕಲೆಗೂ ಜೀವತುಂಬುವ, ಏಳೇಳು ತಲೆಮಾರಿನವರು ಸಾಧಿಸಲು ಸಾಧ್ಯವಾಗದ್ದನ್ನು ಒಬ್ಬಳೇ ಸಾಧಿಸಿ, ಗೆಲುವೆಂದರೆ ಇದೇ ಎಂದು ಹೆಮ್ಮೆಪಡುವಂತೆ ಮಾಡುವ ಸಾಧಕಿಯ ಆತ್ಮೋನ್ನತಿಯ ಜೊತೆಗೆ ಲೌಕಿಕ ಯಶಸ್ಸಿನ ಜೀವನಚಿತ್ರವೇ ‘ನನಗೆ ಚಂದ್ರ ಬೇಕು’. ಈ ಕಾದಂಬರಿಯಲ್ಲಿ ರಂಗಕಲೆ, ಸಿನಿಮಾಗಳ ರಮ್ಯಲೋಕ ಮತ್ತು ಸಾಮಾನ್ಯ ಜನಜೀವನದ ಸಂಘರ್ಷದ ಯಥಾಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಹಿಂದಿ ನಾಟಕಕಾರ ಹಾಗೂ ಕಾದಂಬರಿಕಾರ ಸುರೇಂದ್ರ ವರ್ಮಾ, ಕಲೆ ಮತ್ತು ಕಲಾವಿದನ ಉನ್ನತಿ, ಅವನತಿಯ ಹಂತಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಾರೆ. ವರ್ಮಾರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು, ಕಾದಂಬರಿಯಲ್ಲಿ ಅರ್ಧಕ್ಕಿಂತ ಹೆಚ್ಚುಭಾಗ ರಾಷ್ಟ್ರೀಯ ನಾಟಕಶಾಲೆ, ರೆಪರ್ಟರಿ, ಮಂಡಿಹೌಸ್‌ನ ದೈನಂದಿನ ವಿದ್ಯಮಾನಗಳೇ ಪ್ರತಿಬಿಂಬಿತವಾಗಿವೆ.

ನಯನಾಜೂಕು ಇಲ್ಲದ ಕಲ್ಲಿನ ಚೂರು (ಸಿಲ್‌ಬಿಲ್) ಅನುಭವದ ಸಾಣೆಗೆ ಸಿಕ್ಕು ವರ್ಷಾ ವಸಿಷ್ಠ ರೂಪದ ವಜ್ರವಾಗಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು, ಸಾಧನೆಯ ಪಥದ ಪಯಣದಲ್ಲಿ ಒಬ್ಬಂಟಿಯಾಗಿಯೇ ಸಾಗಿ, ಹಟತೊಟ್ಟು ಆತ್ಮಸಂಗಾತಿ ಹರ್ಷನ ಮಗುವನ್ನು ಉಳಿಸಿಕೊಂಡು ಅವಿವಾಹಿತ ತಾಯಿ- ಭಾವನಾತ್ಮಕ ವಿಧವೆಯಾಗಿ, ಸ್ತ್ರೀ-ಸ್ವಾತಂತ್ರ್ಯದ ಪಾರಮ್ಯ ಮೆರೆಯುವ, ಕಲಾಯಾತ್ರೆಯಲ್ಲಿ ಸಹಯಾತ್ರಿಕರಿಗೂ ನೆಲೆತೋರಿಸುವ, ಸಹೃದಯೀ ಕಲಾವಿದೆಯ ಸಂವೇದನೆಗಳ ಸಾರಸಂಗ್ರಹ ಈ ಕಾದಂಬರಿ.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೇವಲ ಅಭಿನಯವನ್ನು ಮಾತ್ರ ಹೇಳಿಕೊಡುವುದಿಲ್ಲ. ಜೀವನದ ಮತ್ತು ಕಲೆಯ ಎಲ್ಲ ಮಗ್ಗುಲುಗಳನ್ನೂ ಒಳಹೊಕ್ಕು ನೋಡುವ ಅಂತರ್‌ದೃಷ್ಟಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಾರೆ. ಹೇಳಿಕೊಟ್ಟಷ್ಟನ್ನು ಕಲಿಯುವುದಕ್ಕಿಂತ ಅನುಭವದ ಪಾಕಶಾಲೆಯಲ್ಲಿ ಪರಿಪಕ್ವವಾಗಿ ಹೊರಹೊಮ್ಮುವ ಪಾತ್ರಗಳು ರಂಗಮಂಚದ ಕಿನ್ನರ ಲೋಕದಿಂದ ಧರೆಗವತರಿಸಿ ವಾಸ್ತವದ ಧಗೆಯಲ್ಲಿ ಬೆಂದುಹೋಗುವ ಉದಾಹರಣೆಗಳೂ ಕಾಣಿಸುತ್ತವೆ. ಕಲೆಗಾಗಿ ಕಲೆ ಎನ್ನುವವರಿಗೆ ಮಂಡಿಹೌಸ್‌ನ ಶಾಪದ ಅರಿವೂ ಇರಬೇಕು. ರಂಗಮಂಚದಲ್ಲಿನ ಕಲಿಕೆ ಮತ್ತು ರೆಪರ್ಟರಿಯಲ್ಲಿನ ಪರಿಶ್ರಮ ಅಪ್ಪಟ ಕಲಾವಿದರನ್ನು ಸೃಷ್ಟಿಸುತ್ತದೆ. ಈ ಕಾರಣಗಳಿಂದಾಗಿ, ರಂಗಕಲೆಯನ್ನು ಅಭ್ಯಸಿಸಲು ಅನೌಪಚಾರಿಕ ಪಠ್ಯದಂತೆಯೂ ಸುರೇಂದ್ರ ವರ್ಮರ ಈ ಕೃತಿಯನ್ನು ಓದಿಕೊಳ್ಳಬಹುದು. ಅಂತೆಯೇ, ಅರಿಸ್ಟಾಟಲ್‌ನ ನಾಟಕ ಮೀಮಾಂಸೆಗೆ ಕಾದಂಬರಿಯನ್ನೇನಾದರೂ ಉದಾಹರಣೆಯಾಗಿ ನೀಡಬಹುದು ಎಂಬುದಿದ್ದರೆ ಈ ಕೃತಿಯನ್ನೂ ಹೆಸರಿಸಬಹುದು.


1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಎಚ್.ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ. ಮೂಲ ಕೃತಿಯ ಯಥಾವತ್ ಅವತರಣಿಕೆಯ ಪ್ರಯತ್ನದಲ್ಲಿ ಹಲವು ತೊಡಕುಗಳು, ಅಬದ್ಧಗಳು ಅಡ್ಡಬಂದಿದ್ದರೂ ಕಥೆಯ ಓಟವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಲ್ಲಿ ಅನುವಾದ ಯಶಸ್ವಿಯಾಗಿದೆ. ಪ್ರಾಚೀನ ಕಾವ್ಯ, ನಾಟಕ, ಆಧುನಿಕ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿಯ ಆಳವಾದ ಪರಿಚಯ ಇದ್ದು, ಮೂಲ ಉಚ್ಚಾರದ ಪರಿಕಲ್ಪನೆ ಅನುವಾದಕರಿಗೆ ಇದ್ದಿದ್ದರೆ ಅನುವಾದಕ್ಕೆ ಇನ್ನಷ್ಟು ಮೆರಗು ಬರುತ್ತಿತ್ತು.

ರಷ್ಯನ್, ಫ್ರೆಂಚ್ ಮತ್ತಿತರ ದೇಶಗಳ ನಾಟಕಗಳ ಹೆಸರುಗಳು ಮೂಲದ ಹೆಸರಿನಂತಿಲ್ಲವೆನ್ನುವ ಕೊರತೆ ಎದ್ದು ಕಾಣುತ್ತದೆ. ಮರುಮುದ್ರಣದ ಸಮಯದಲ್ಲಾದರೂ ತಪ್ಪುಗಳನ್ನು ಸರಿಪಡಿಸುವ ಕೆಲಸವನ್ನು ಅಕಾಡೆಮಿ ಮಾಡಬೇಕಿದೆ. ಪುಟಕ್ಕೆ ಒಂದೆರಡು ಅಕ್ಷರ ಸ್ಖಾಲಿತ್ಯ, ಮುದ್ರಣ ದೋಷಗಳು, ಮೂಲ ಹಿಂದಿಯ ಪರಿಸರವನ್ನು ಕಟ್ಟಿಕೊಡುವ ಕೆಲಸದಲ್ಲಿ ಸೊರಗುವ ಅನುವಾದದ ಗುಣಮಟ್ಟ ಓದಿನ ರುಚಿ ಕೆಡಿಸುವಂತಿದೆ. ಸಾಹಿತ್ಯ ಅಕಾಡೆಮಿ ಪ್ರಕಟಿಸುತ್ತಿರುವ ಕನ್ನಡ ಅನುವಾದಗಳೆಲ್ಲವೂ ಈ ರೀತಿಯ ಅವಜ್ಞೆಗೆ ತುತ್ತಾಗಿವೆ ಎನ್ನುವುದು ವಿಷಾದದ ಸಂಗತಿ.


ಅಭಿಶಪ್ತ ರಂಗನಾಯಕಿಯ ಸಾಧನೆಯ ಇತಿವೃತ್ತ
ಕಾದಂಬರಿ : ನನಗೆ ಚಂದ್ರ ಬೇಕು
ಮೂಲ ಹಿಂದಿ : ಸುರೇಂದ್ರ ವರ್ಮ

ಕನ್ನಡ ಅನುವಾದ : ಎಚ್. ಎಸ್. ಪಾರ್ವತಿ

ಪ್ರಕಾಶಕರು : ಸಾಹಿತ್ಯ ಅಕಾದೆಮಿ, ನವದೆಹಲಿ
ಪುಟಗಳು : 636
ಬೆಲೆ : 350

ಆವೃತ್ತಿ : 2010


ವಾಸ್ತವ ಸ್ಥಿತಿಯ ದುಃಖ ದುಮ್ಮಾನಗಳನ್ನೆಲ್ಲಾ ರಂಗಮಂಚದ ಕಿನ್ನರಲೋಕದಲ್ಲಿ ಮುಳುಗಿ ಮರೆಯಲೆತ್ನಿಸುವ ಅಭಿಶಪ್ತ ಸೌಮ್ಯಮುದ್ರಾ ಪಾತ್ರಧಾರಿ ಸಿಲ್ಬಿಲ್-ಉರುಫ್-ಯಶೋದಾ ಶರ್ಮ-ಉರುಫ್-ವಷರ್ಾ ವಸಿಷ್ಠ ಎಂಬ ಸಂಪ್ರದಾಯಬದ್ಧ ಮನೆತನದ ಸಹಜ ಅಭಿನೇತ್ರಿ ಶಹಜಹಾಂಪುರದ 54ನೇ ನಂಬರಿನ ಮನೆಯಿಂದ ಹೊರಟು, ಮಿಶ್ರಿಲಾಲ್ ಡಿಗ್ರಿ ಕಾಲೇಜಿನ ರಂಗಮಂಚದಲ್ಲಿ ದಿವ್ಯಾ ಕತ್ಯಾಲ್ಳಿಂದ ದೀಕ್ಷೆ ಪಡೆದು, ಲಕ್ನೋದ ನಾಟಕಾಸಕ್ತರ ಜೊತೆ ಬೆಳೆದು, ರಾಷ್ಟ್ರೀಯ ನಾಟಕ ಶಾಲೆ ಮತ್ತು ರೆಪರ್ಟರಿಯಲ್ಲಿ ಡಾಕ್ಟರ್ ಅಟಲ್, ಸೂರ್ಯಭಾನು, ಹರ್ಷ ಮತ್ತು ಸಹನಟರಲ್ಲಿ ಪಳಗಿ, ಅಭಿಶಪ್ತ ಅಭಿದಾನವನ್ನು ಸಾರ್ಥಕಗೊಳಿಸುವಂತೆ ರಂಗಮಂಚದ ಟ್ರ್ಯಾಜಿಡಿ ಕ್ವೀನ್ ಎನಿಸಿ, ಕಲಾತ್ಮಕ ಸಿನಿಮಾಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಪುರಸ್ಕಾರಗಳನ್ನು ತನ್ನದಾಗಿಸಿಕೊಂಡು, ಮುಂಬೈ ಮಾಯಾನಗರಿಯ ಕಮಷರ್ಿಯಲ್ ಚಿತ್ರಗಳಲ್ಲಿ ಯಶಸ್ವಿಯಾಗಿ, ವಿದೇಶೀ ಚಿತ್ರಗಳಲ್ಲೂ ಅವಕಾಶ ಗಿಟ್ಟಿಸಿ ಸೈ ಎನಿಸಿಕೊಂಡು, ಸೆಲ್ಯುಲಾಯ್ಡ್ನ ಮಾಂತ್ರಿಕ ದೀಪದಡಿಯಲ್ಲೇ ರಂಗಕಲೆಗೂ ಜೀವತುಂಬಿಸುವ, ಏಳೇಳು ತಲೆಮಾರಿನವರು ಸಾಧಿಸಲು ಸಾಧ್ಯವಾಗದ್ದನ್ನು ಒಬ್ಬಳೇ ಸಾಧಿಸಿ, ಗೆಲುವೆಂದರೆ ಇದೇ ಎಂದು ಹೆಮ್ಮೆಪಡುವಂತೆ ಮಾಡುವ ಸಾಧಕಿಯ ಆತ್ಮೋನ್ನತಿಯ ಜೊತೆಗೆ ಲೌಕಿಕ ಯಶಸ್ಸಿನ ಜೀವನಚಿತ್ರವೇ ನನಗೆ ಚಂದ್ರ ಬೇಕು. ರಂಗಕಲೆ, ಸಿನಿಮಾಗಳ ರಮ್ಯ ಲೋಕ ಮತ್ತು ಸಾಮಾನ್ಯ ಜನಜೀವನದ ಸಂಘರ್ಷದ ಯಥಾಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಹಿಂದಿ ನಾಟಕಕಾರ ಹಾಗೂ ಕಾದಂಬರಿಕಾರ ಸುರೇಂದ್ರ ವರ್ಮ ಕಲೆ ಮತ್ತು ಕಲಾವಿದನ ಉನ್ನತಿ, ಅವನತಿಯ ಹಂತಗಳನ್ನು ಕಣ್ಣಿಗೆ ಕಟ್ಟುವಂತೆ ವಣರ್ಿಸುತ್ತಾರೆ. ಹಲವು ಉತ್ಕೃಷ್ಟ ನಾಟಕಗಳನ್ನು ರಚಿಸಿ ರಾಷ್ಟ್ರೀಯ ನಾಟಕ ಅಕಾಡೆಮಿ ಪುರಸ್ಕಾರಗಳಿಸಿರುವ ವಮರ್ಾರ ಈ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದು ಇದರಲ್ಲಿ ಅರ್ಧಕ್ಕಿಂತ ಹೆಚ್ಚುಭಾಗ ರಾಷ್ಟ್ರೀಯ ನಾಟಕಶಾಲೆ, ರೆಪರ್ಟರಿ, ಮಂಡಿಹೌಸ್ನ ದೈನಂದಿನ ವಿದ್ಯಮಾನಗಳೇ ಪ್ರತಿಬಿಂಬಿತವಾಗಿವೆ.

ನಯಾನಾಜೂಕು ಇಲ್ಲದ ಕಲ್ಲಿನ ಚೂರು (ಸಿಲ್ಬಿಲ್) ಅನುಭವದ ಸಾಣೆಗೆ ಸಿಕ್ಕು ವಷರ್ಾ ವಸಿಷ್ಠ ರೂಪದ ವಜ್ರವಾಗಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು, ಲೋಕಾಪವಾದವನ್ನೂ ಮೀರಿ, ಸಾಧನೆಯ ಪಥದ ಪಯಣದಲ್ಲಿ ಒಬ್ಬಂಟಿಯಾಗಿಯೇ ಸಾಗಿ, ಹಠತೊಟ್ಟು ಆತ್ಮಸಂಗಾತಿ ಹರ್ಷನ ಮಗುವನ್ನು ಉದರದಲ್ಲಿ ಉಳಿಸಿಕೊಂಡು ಅವಿವಾಹಿತ ತಾಯಿ-ಭಾವನಾತ್ಮಕ ವಿಧವೆಯಾಗಿ, ಸ್ತ್ರೀ-ಸ್ವಾತಂತ್ರ್ಯದ ಪಾರಮ್ಯ ಮೆರೆಯುವ, ಕಲಾಯಾತ್ರೆಯಲ್ಲಿ ಸಹಯಾತ್ರಿಕರಿಗೂ ನೆಲೆತೋರಿಸುವ ಸಹೃದಯೀ ಕಲಾವಿದೆಯ ಸಂವೇದನೆಗಳ ಸಾರಸಂಗ್ರಹವೇ ನನಗೆ ಚಂದ್ರ ಬೇಕು ಕೃತಿಯಲ್ಲಿದೆ.


ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೇವಲ ಅಭಿನಯವನ್ನು ಮಾತ್ರ ಹೇಳಿಕೊಡುವುದಿಲ್ಲ. ಜೀವನದ ಮತ್ತು ಕಲೆಯ ಎಲ್ಲ ಮಗ್ಗುಲುಗಳನ್ನೂ ಒಳಹೊಕ್ಕು ನೋಡುವ ಅಂತರ್ದೃಷ್ಟಿಯನ್ನು ಅಥರ್ೈಸಿಕೊಳ್ಳಲು ಸಹಾಯಮಾಡುತ್ತಾರೆ. ಹೇಳಿಕೊಟ್ಟಷ್ಟನ್ನು ಮಾತ್ರ ಕಲಿಯುವುದಕ್ಕಿಂತ ಅನುಭವದ ಪಾಕಶಾಲೆಯಲ್ಲಿ ಪರಿಪಕ್ವವಾಗಿ ಹೊರಹೊಮ್ಮುವ ಪಾತ್ರಗಳು ರಂಗಮಂಚದ ಕಿನ್ನರ ಲೋಕದಿಂದ ಧರೆಗವತರಿಸಿ ವಾಸ್ತವದ ಧಗೆಯಲ್ಲಿ ಬೆಂದುಹೋಗುವ ಉದಾಹರಣೆಗಳೂ ಕಾಣಿಸುತ್ತವೆ. ಕಲೆಗಾಗಿ ಕಲೆ ಎನ್ನುವವರಿಗೆ ಮಂಡಿಹೌಸ್ನ ಶಾಪದ ಅರಿವೂ ಇರಬೇಕು. ರಂಗಮಂಚದಲ್ಲಿನ ಕಲಿಕೆ ಮತ್ತು ರೆಪರ್ಟರಿಯಲ್ಲಿನ ಪರಿಶ್ರಮ ಅಪ್ಪಟ ಕಲಾವಿದರನ್ನು ಸೃಷ್ಟಿಸುತ್ತದೆ. ರಂಗಕಲೆಯನ್ನು ಅಭ್ಯಸಿಸಲು ಅನೌಪಚಾರಿಕ ಪಠ್ಯವಾಗಿ ಸುರೇಂದ್ರ ವರ್ಮರ ನನಗೆ ಚಂದ್ರ ಬೇಕು ಕೃತಿಯನ್ನು ನಿಗದಿಗೊಳಿಸಿದರೆ ಕಲಾವಿದರಿಗೆ ಅನುಭವದ ರಸಪಾಕವನ್ನೇ ಧಾರೆಯೆರೆದಂತಾಗುತ್ತದೆ.
ಅರಿಸ್ಟಾಟಲ್ನ ನಾಟಕ ಮೀಮಾಂಸೆಗೆ ಕಾದಂಬರಿಯನ್ನೇನಾದರೂ ಉದಾಹರಣೆಯಾಗಿ ನೀಡಬಹುದು ಎಂಬುದಿದ್ದರೆ ಸುರೇಂದ್ರ ವಮರ್ಾರ ನನಗೆ ಚಂದ್ರ ಬೇಕು (ಮುಝೆ ಚಾಂದ್ ಚಾಹಿಯೇ) ಕೃತಿಗಿಂತ ಉತ್ತಮ ಉದಾಹರಣೆ ಕೊಡಲು ಸಾಧ್ಯವೇ ಇಲ್ಲ.

ಇಂಗ್ಲಿಷ್ನ ಪಿಕರೆಸ್ಕ್ ನಾವೆಲ್ ಪ್ರಕಾರದಂತೆ ಎಲ್ಲಿಯೋ ಶುರುವಾಗಿ, ಎಲ್ಲೆಲ್ಲಿಯೋ ತಿರುಗಾಡಿ, ಇನ್ನೆಲ್ಲೋ ಕರೆದೊಯ್ದು, ಮತ್ತೆಲ್ಲೋ ಧುತ್ತೆಂದು ಪ್ರತ್ಯಕ್ಷವಾಗಿಸುವ ಕಥೆ ಇದರಲ್ಲಿದೆ. ಅದೆಷ್ಟು ಪಾತ್ರಗಳು, ಸನ್ನಿವೇಶಗಳು, ಪರ-ವಿರೋಧಿ ಭಾವಗಳು, ಟೊಳ್ಳು-ಗಟ್ಟಿ ಸಂಬಂಧಗಳು, ದೇಹ-ಮನಸ್ಸುಗಳ ಹಸಿವು, ಸಾಧನೆಯ ಕಿಚ್ಚು, ಅಚಲ ನಿಧರ್ಾರ, ಎಲ್ಲವೂ, ಎಲ್ಲರೂ ಒಂದೊಂದು ಜೀವಂತ ಪಾತ್ರಗಳೇ ಇಲ್ಲಿ. ಕಾಳಿದಾಸನ ಕಾವ್ಯ ಮತ್ತು ನಾಟಕಗಳ ಪ್ರಸ್ತಾಪ ಕೃತಿಯುದ್ದಕ್ಕೂ ಸೂತ್ರದಂತೆ ಸುತ್ತಿಕೊಂಡೇ ಬರುತ್ತದೆ. ಹಾಗೆಯೇ ಆ್ಯಂಟನ್ ಚೆಕೋವ್ನ ನಾಟಕಗಳು ಮತ್ತು ಅದರ ಪಾತ್ರಗಳೊಂದಿಗೆ ತಾದಾತ್ಮಹೊಂದುವ ವಷರ್ಾಳ ಮನೋಭಾವ ಕೃತಿಯುದ್ದಕ್ಕೂ ನೆರಳಿನಂತೆ ಹಿಂಬಾಲಿಸುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಬದಲಾಗದ ತಂದೆ, ಪುರಾತನ ಮೌಲ್ಯಗಳ ಪ್ರತೀಕ ಅನುಷ್ಟುಪ್ ಎಂಬ ಮಾತನಾಡುವ ಗಿಳಿ, ಸನ್ನಿವೇಶಕ್ಕೆ ಬಣ್ಣ ಬದಲಿಸುವ ಗೋಸುಂಬೆ ಸಂಬಂಧಿಗಳು, ಸಾಧನೆಗೆ ಬೆಂಬಲ ನೀಡುವ ತಮ್ಮ-ತಂಗಿ-ಗೆಳತಿ-ಗೆಳೆಯರು, ಪ್ರೋತ್ಸಾಹನೀಡುವ ಗುರು-ಹಿರಿಯರು, ಕಾಲೆಳೆಯುವ ಸಮಯಸಾಧಕರು ಎಲ್ಲರೂ ತಮ್ಮ ಇರುವಿಕೆಯನ್ನು ಸಾರ್ಥಕಪಡಿಸಿಕೊಂಡಿದ್ದಾರೆ. ಇಲ್ಲಿ ಪ್ರಸ್ತಾಪಿತವಾಗಿರುವ ಕಾವ್ಯ, ಕಥೆ, ಕಾದಂಬರಿ, ನಾಟಕಗಳ ಜೊತೆಗೆ ಮೂಲ ಕೃತಿಗಳ ಆಯ್ದ ಭಾಗಗಳ ಅವತರಣಿಕೆಗಳೊಂದಿಗೆ ಓದುಗರನ್ನು ರಮ್ಯಲೋಕಕ್ಕೇ ಕರೆದೊಯ್ಯುವ ಸುರೇಂದ್ರ ವರ್ಮರ ಅಗಾಧ ಪಾಂಡಿತ್ಯಕ್ಕೆ ಎಂಥವರೂ ತಲೆದೂಗಲೇಬೇಕು. ಸಿನಿಮಾ ವ್ಯಾಕರಣ ಆಥರ್ೈಸಿಕೊಳ್ಳಲಿಕ್ಕೆ, ಕಲಾತ್ಮಕ, ಕಮಷರ್ಿಯಲ್, ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರರಂಗದ ತೌಲನಿಕ ಅಧ್ಯಯನಕ್ಕೆ, ಇಲ್ಲಿ ವಿಫುಲ ಅವಕಾಶವಿದೆ.


1996ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರವಾದ ಈ ಹಿಂದಿ ಕೃತಿಯನ್ನು ಹಿರಿಯ ಅನುವಾದಕಿ ಶ್ರೀಮತಿ ಎಚ್. ಎಸ್. ಪಾರ್ವತಿಯವರು ಕನ್ನಡಕ್ಕೆ ತಂದಿದ್ದು ಚಂದ್ರನ ತುಂಡೊಂದನ್ನು ಓದುಗರಿಗೆ ನೀಡಿದ್ದಾರೆ. ಮೂಲ ಕೃತಿಯ ಯಥಾವತ್ ಅವತರಣಿಕೆಯ ಪ್ರಯತ್ನದಲ್ಲಿ ಹಲವು ತೊಡಕುಗಳು, ಅಬದ್ಧಗಳು ಅಡ್ಡಬಂದಿದ್ದರೂ ಕಥೆಯ ಓಟವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವಲ್ಲಿ ಕನ್ನಡದ ಅನುವಾದ ಯಶಸ್ವಿಯಾಗಿದೆ. ಪ್ರಾಚೀನ ಕಾವ್ಯ, ನಾಟಕ, ಆಧುನಿಕ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿಯ ಆಳವಾದ ಪರಿಚಯ ಇದ್ದು, ಮೂಲ ಉಚ್ಚಾರದ ಪರಿಕಲ್ಪನೆ ಅನುವಾದಕರಿಗೆ ಇದ್ದಿದ್ದರೆ ಕನ್ನಡ ಅನುವಾದಕ್ಕೆ ಇನ್ನಷ್ಟು ಮೆರಗು ಬರುತ್ತಿತ್ತು. ರಷ್ಯನ್, ಫ್ರೆಂಚ್ ಮತ್ತಿತರ ದೇಶಗಳ ನಾಟಕಗಳ ಹೆಸರುಗಳು ಮೂಲದ ಹೆಸರಿನಂತಿಲ್ಲವೆನ್ನುವ ಕೊರತೆ ಎದ್ದು ಕಾಣುತ್ತದೆ. ಬಹುಶಃ ಒತ್ತಡ ಮತ್ತು ಸೀಮಿತ ಕಾಲಾವಧಿಯಲ್ಲಿ ಅನುವಾದ ಕಾರ್ಯವನ್ನು ಮುಗಿಸಿ ಕೊಡಲೇಬೇಕೆಂಬ ಹಠಕ್ಕೆ ಬಿದ್ದು ಅನುವಾದಿಸಿದಂತೆ ಕಾಣುವ ಈ ಕೃತಿಯನ್ನು ಮರುಮುದ್ರಣದ ಸಮಯದಲ್ಲಾದರೂ ಸುಧಾರಿಸಿ, ತಪ್ಪುಗಳನ್ನು ತಿದ್ದುಪಡಿಮಾಡುವ ಕೆಲಸ ಸಾಹಿತ್ಯ ಅಕಾಡೆಮಿ ಮಾಡಬೇಕಿದೆ. ಕನಿಷ್ಟ ಪುಟಕ್ಕೆ ಒಂದೆರಡು ಅಕ್ಷರ ಸ್ಖಾಲಿತ್ಯ, ಮುದ್ರಣ ದೋಷಗಳು, ಮೂಲ ಹಿಂದಿಯ ಪರಿಸರವನ್ನು ಕಟ್ಟಿಕೊಡುವ ಕೆಲಸದಲ್ಲಿ ಸೊರಗುವ ಅನುವಾದದ ಗುಣಮಟ್ಟ ಕನ್ನಡದ ತಜರ್ುಮೆಯನ್ನು ಜರ್ಝರಿತಗೊಳಿಸಿವೆ. ಸಾಹಿತ್ಯ ಅಕಾಡೆಮಿ ಪ್ರಕಟಿಸುತ್ತಿರುವ ಕನ್ನಡ ಅನುವಾದಗಳೆಲ್ಲವೂ ಈ ರೀತಿಯ ಅವಜ್ಞೆಗೆ ತುತ್ತಾಗಿವೆ ಎನ್ನುವುದು ಕನ್ನಡದ ಓದುಗರಿಗೆ ಬೇಸರ ತರಿಸಿದೆ. ಮುಖಪುಟ ರಚಿಸುವ ಕಲಾವಿದರಾದರೂ ಅಷ್ಟೇ, ಕೃತಿಯನ್ನು ಒಮ್ಮೆ ಓದಿ, ಅದರ ಭಾವವನ್ನು ಸ್ಫುಟವಾಗಿ ಒಡಮೂಡಿಸಬೇಕು. ಸುಮ್ಮನೇ ಶೀಷರ್ಿಕೆಯಷ್ಟನ್ನೇ ಕೇಳಿ ನಾಲ್ಕುಗೆರೆ ಎಳೆದು ಸಂಭಾವನೆ ಪಡೆಯುವುದರಲ್ಲೇ ಸಾರ್ಥಕ್ಯ ಗಳಿಸಿಕೊಳ್ಳಬಾರದು, ಅಲ್ಲವೇ?


ಇದೇ ಸೆಪ್ಟೆಂಬರ್ 7 ಕ್ಕೆ 70ರ ಹರೆಯಕ್ಕೆ ಕಾಲಿಟ್ಟಿರುವ / ಕಾಲಿಡುತ್ತಿರುವ ಸುರೇಂದ್ರ ವರ್ಮ (ಜನನ: 1941) ಪ್ರಾದೇಶಿಕ ಹಾಗೂ ರಾಷ್ಟ್ರೀಯ ರಂಗಭೂಮಿ, ಕಲಾತ್ಮಕ ಹಾಗೂ ಕಮಷರ್ಿಯಲ್ ಸಿನಿಮಾ, ಟಿ.ವಿ. ಛಾನೆಲ್ಗಳ ಧಾರಾವಾಹಿಗಳು, ಸಾಂಗ್ ಅಂಡ್ ಡ್ರಾಮಾ ಡಿವಿಷನ್, ಮಂಡಿಹೌಸ್ಗಳೊಂದಿಗಿನ ನಿಕಟ ಒಡನಾಟದ ಅನುಭವಗಳನ್ನು ಕಾದಂಬರಿಯ ಭೂಮಿಕೆಯಾಗಿಯೇ ಬಳಸಿದ್ದು, ಎಲ್ಲಿಯೂ ಬೇಸರ ತರಿಸದೆ ಸೊಗಸಾದ ಡಾಕ್ಯುಡ್ರಾಮಾದಂತೆಯೇ ಓದಿಸಿಕೊಂಡು ಹೋಗುತ್ತದೆ. ರೆಪರ್ಟರಿ ಮತ್ತು ರಾಷ್ಟ್ರೀಯ ನಾಟಕಶಾಲೆಯ ರಿಸಹರ್ಸಲ್ಗಳ ಪ್ರತಿಯೊಂದೂ ಸೂಕ್ಷ್ಮ ವಿವರಗಳು, ಪಾತ್ರಧಾರಿಗಳ ಮಾನಸಿಕ ಸಿದ್ಧತೆಗಳನ್ನು ಕುರಿತ ವಿಶ್ಲೇಷಣೆ ಅತ್ಯಂತ ಸಹಜವಾಗಿ ಮೂಡಿಬಂದಿದ್ದು ಭಾರತದ ಯಾವುದೇ ನಾಟಕ ಕಂಪೆನಿ, ರೆಪರ್ಟರಿ ಅಥವಾ ರಂಗಭೂಮಿ ತರಬೇತಿ ಶಾಲೆಗಳ ವಿದ್ಯಾಥರ್ಿಗಳಿಗೆ ಸಮೃದ್ಧ ಅನುಭವ ಉಣಬಡಿಸುವ ಪೂರಕ ಪಠ್ಯವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ನಮ್ಮ ರಂಗಭೂಮಿ ಕಲಾವಿದರು, ನಿದರ್ೇಶಕರು, ನಟರು ಈ ಕೃತಿಯನ್ನು ಅಭ್ಯಸಿಸುವಷ್ಟು ಪುರುಸೊತ್ತು ಮಾಡಿಕೊಳ್ಳುವರೆಂದು ಆಶಿಸೋಣ.


(ಮುಝೆ ಚಾಂದ್ ಚಾಹಿಯೇ ಹಿಂದಿ ಕಾದಂಬರಿಯ ಮುಖಪುಟದಲ್ಲಿ ನಟಿ ಉಮರ್ಿಳಾ ಮಾತೋಂಡ್ಕರ್ಳ ಭಾವಚಿತ್ರ ಮುದ್ರಿತವಾಗಿದ್ದು ಅನೇಕರು ಆಕೆಯ ಜೀವನಚಿತ್ರವಿದು ಎಂದು ತಪ್ಪಾಗಿ ಭಾವಿಸಬಹುದಾದ ಸಾಧ್ಯತೆಗಳಿವೆ. ಮುಝೆ ಚಾಂದ್ ಚಾಹಿಯೇ ಎಂಬ ಹೆಸರಿನ ಹಿಂದಿ ಚಲನಚಿತ್ರವೂ ತೆರೆಕಂಡಿದ್ದು ಅದರ ಕಥೆಗೂ ಈ ಕಾದಂಬರಿಯ ಕಥೆಗೂ ಯಾವುದೇ ಸಂಬಂಧವಿಲ್ಲ.)