Saturday, March 19, 2011

The Sunday Indian - 21 March 2011 - Rs 3000 Award to Bedre's Letter

ವೃದ್ಧರನ್ನು ಗೌರವಿಸದ ದೇಶಕ್ಕೆ ಭವಿಷ್ಯವಿಲ್ಲ!
ವೃದ್ಧರಿಗೆ ಗೌರವಾನ್ವಿತವಾಗಿ ಬದುಕುವ ವಾತಾವರಣ ಒದಗಿಸಬೇಕೆಂಬ ಸಂಪಾದಕೀಯ (ಅರಿಂದಮ್ ಚೌಧುರಿ) ಸಕಾಲಿಕ. ಹಿರಿಯ ನಾಗರಿಕರ ಬದುಕು ಹಸನಾದಾಗಲೇ ಕಿರಿಯರಿಗೆ ಮಾರ್ಗದರ್ಶನ ಮಾಡಲು ಸಾಧ್ಯ. ಭ್ರಷ್ಟರ ಮುಷ್ಠಿಯಲ್ಲಿರುವ ಭರತ ಖಂಡವನ್ನು ಕಾಪಾಡಲು ಮತದಾರ ಪ್ರಭುಗಳೇ ಮನಸ್ಸು ಮಾಡಬೇಕು! ಕೇವಲ ಹಣ ಮಾಡುವುದೇ ಭ್ರಷ್ಟಾಚಾರವಲ್ಲ.  ಸರ್ಕಾರಿ ಅಧಿಕಾರಿಗಳಲ್ಲಿ ಬಹಳಷ್ಟು ಮೇಲ್ದರ್ಜೆಯ ಅಧಿಕಾರಿಗಳು ತಮ್ಮ ಅಧಿಕಾರದ ಮದದಿಂದ ಮೂಢರಂತೆ ವರ್ತಿಸಿ, ಇತರರಲ್ಲಿ ಭೀತಿ ಹುಟ್ಟಿಸುತ್ತಿರುವುದು, ತನ್ಮೂಲಕ ಹಣ ಬಾಚುತ್ತಿರುವುದೂ ತೀರಾ ಕೆಳಮಟ್ಟದಿಂದಲೇ ಹಬ್ಬಿದೆ.
ಸಮಯ ಕದಿಯುವಿಕೆ ಇಡೀ ರಾಷ್ಟ್ರದಲ್ಲಿ ಪಿಡುಗಿನಂತೆ ಹಬ್ಬಿದೆ. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕಾರ್ಪೊರೇಟ್ ಕೆಲಸದ ಸಂಸ್ಕೃತಿ ಅಳವಡಿಸಿದರೆ ಈಗಿರುವ ಅರ್ಧಕ್ಕಿಂತ ಹೆಚ್ಚು ನೌಕರರನ್ನು ನಿವೃತ್ತಿಗೊಳಿಸಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಇದನ್ನೆಲ್ಲಾ ಮೌನವಾಗಿ ಸಹಿಸಿಕೊಂಡಿರುವುದೂ ಭ್ರಷ್ಟಾಚಾರವೇ!  ದೇವರೇ, ಈ ಸಮಯಗಳ್ಳರಿಂದ ದೇಶವನ್ನು ಕಾಪಾಡುವವರು ಯಾರು?
ಬೇದ್ರೆ ಎನ್. ಮಂಜುನಾಥ
ಚಿತ್ರದುರ್ಗ


The Sunday Indian - 21 March 2011 - Rs 3000 Award to Bedre's Letter