Monday, August 16, 2010

Kavalu - A Reflection of Unsettled Life - Review by Bedre Manjunath in Karmaveera 22 Aug 2010



Kavalu - A Reflection of Unsettled Life
Review by Bedre Manjunath in Karmaveera 22 Aug 2010

ಕವಲು - ಸಮಾಜೋ-ಆಥರ್ಿಕ-ಸಾಂಸ್ಕೃತಿಕ-ಕೃತಿಕೇಂದ್ರಿತ-ಪ್ರಸ್ತುತ ವಿಮಶರ್ಾ ನೋಟ

ಕಾದಂಬರಿ : ಕವಲು
ಕಾದಂಬರಿಕಾರರು : ಎಸ್. ಎಲ್. ಭೈರಪ್ಪ
ಪ್ರಕಾಶಕರು : ಸಾಹಿತ್ಯ ಭಂಡಾರ, ಬಳೇಪೇಟೆ, ಬೆಂಗಳೂರು.
ಪುಟಗಳು : 304 ಬೆಲೆ : 250
ಆವೃತ್ತಿ : 2010 ಜೂನ್ (ಹದಿನೈದೇ ದಿನಗಳಲ್ಲಿ 6 ಆವೃತ್ತಿಗಳು!)

'ಐ ವಾಂಟ್ ಟು ಟಾಕ್ ಟು ಯು' ಎಂದು ಕಾಲುಕೆರೆದು ನಿಲ್ಲುವ, 'ತಿಳುಕ' ಎಂದು ತೀಮರ್ಾನ ನೀಡುವ ಪಾತ್ರಗಳ ಅಸಂಗತ ಸಾಂಗತ್ಯದ ಭೈರಪ್ಪನವರ 'ಕವಲು' ವಿನಾಕಾರಣ ಟೀಕೆಗೊಳಗಾಗುತ್ತಿದೆ. ಬದಲಾದ ಮತ್ತು ನಿರಂತರ ಸ್ಥಿತ್ಯಂತರಗೊಳ್ಳುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಕಲಾಕೃತಿಯಾಗಿಸಿ, ತಿದ್ದಿ ತೀಡಿ ವಣರ್ಿಸಲು ಪ್ರಯತ್ನಿಸದೇ ಕೇವಲ ಕನ್ನಡಿ ಹಿಡಿದು ತೋರಿಸುತ್ತಿರುವುದೇ 'ಕವಲು' ಕಾದಂಬರಿಯ ವಿಶೇಷತೆಯಾಗಿದ್ದು 'ಇದ್ದದ್ದು ಇದ್ಹಂಗೆ ಹೇಳಿದ್ರೆ ಎದ್ ಬಂದು ಎದೆಗೇ ಒದ್ರಂತೆ' ಎನ್ನುವವರೇ ಜಾಸ್ತಿಯಾಗಿದ್ದಾರೆ. 'ಯಾವ ಯಾವ ಜೀವಂತ ಅಥವಾ ಭೂಗತ ವ್ಯಕ್ತಿಗಳತ್ತ ಕನ್ನಡಿ ಹಿಡಿದಿದ್ದೀರಿ?' ಎಂದು ಭೈರಪ್ಪನವರನ್ನೇನು ಕೇಳುವ ಅಗತ್ಯವಿಲ್ಲ. ಹಲವು ರಾಜಕಾರಣಿಗಳ, ಮುಖಂಡರ, ಗೋಮುಖ ವ್ಯಾಘ್ರಗಳ ಕಾಮಕಾಂಡಗಳನ್ನು ಈಗಾಗಲೇ ಓದಿದವರಿಗೆ ಪಾತ್ರಗಳ ಹೆಸರುಗಳು ಥಟ್ಟಂತ ಹೊಳೆದುಬಿಡುತ್ತವೆ. ಉದಾಹರಣೆಗೆ ಕೆಲವೇ ಕಾಲ ವಿದ್ಯಾಮಂತ್ರಿಯಾಗಿದ್ದ ರಸಿಕ ಪಾತ್ರ. ಹೆಸರಿನಲ್ಲೇ ಗುರುತಿಸಿಕೊಂಡುಬಿಟ್ಟಿದೆ!
ಒಂದು ಕಾದಂಬರಿಯನ್ನು ಅದು ಇರುವಂತೆಯೇ ಸ್ವೀಕರಿಸುವುದನ್ನು ಬಿಟ್ಟು, 'ಅದು ಹಾಗಿರಬೇಕಿತ್ತು, ಹೀಗಿರಬೇಕಿತ್ತು, ಹಾಗೆ ಹೇಳಿದ್ದರಿಂದ ಎಲ್ಲೆಲ್ಲಿಯೋ ಚಿವುಟಿದಂತಾಗಿದೆ, ಇವರ ಪಾತ್ರಗಳು ಬರೀ ಸ್ತ್ರೀವಾದ ವಿರೋಧಿಯಾಗಿ, ಸನಾತನ ಸಂಸ್ಕೃತಿಯ ಪೋಷಕವಾಗಿ ಮಾತನಾಡುತ್ತಿವೆ, ಹಾದರದ ಅನಾವಶ್ಯಕ ವೈಭವೀಕರಣ ಹೈ ಸೊಸೈಟಿಯ ಪ್ರತೀಕವಾಗಿದೆ, ಹಾಗೆ, ಹೀಗೆ' ಎಂದು ಹೀಗಳೆಯುತ್ತಿರುವ ವಿದ್ಯಾಪರ್ವತಗಳ ದಂತಗೋಪುರದ ವಿಮರ್ಶಕರು ಯತಾರ್ಥವನ್ನು ಗ್ರಹಿಸಲು ಸೋಲುತ್ತಿದ್ದಾರೆ ಅಥವಾ ಗ್ರಹಿಸಿದ್ದರೂ ಹಾಗೆಂದು ಹೇಳಿಬಿಟ್ಟರೆ ತಮ್ಮ ಬಂಡವಾಳವೆಲ್ಲಿ ಬಯಲಿಗೆ ಬರುತ್ತದೋ ಎಂದು ತೋರಿಕೆಯ ಪ್ರತಿಭಟನೆಗಿಳಿದಿದ್ದಾರೆ.
ಪಾಶ್ಚಾತ್ಯ ಕಾದಂಬರಿಗಳು, ಅದರಲ್ಲೂ ಥ್ರಿಲ್ಲರ್ಗಳು ಬೆಸ್ಟ್ ಸೆಲ್ಲರ್ಗಳಾದಾಗ ಮತ್ತು ಅವುಗಳನ್ನು ಆಧರಿಸಿದ ಚಲನಚಿತ್ರಗಳು ತೆರೆಗೆ ಬಂದಾಗ ಅಲ್ಲಿ ಕಾಣುವುದು ಸಾಫಿಸ್ಟಿಕೇಟೆಡ್ ಡಿಬಾಚರಿ. ಜೇಮ್ಸ್ಬಾಂಡ್ ಪಾತ್ರದ ಸುತ್ತ ಅದೆಷ್ಟುಬಾರಿ ಇದು ಪುನಾವರ್ತನೆಯಾಗುತ್ತದೆ ಎನ್ನುವುದು ಯಾವುದೇ ಮುಜುಗರವಿಲ್ಲದೇ ಜಗಜ್ಜಾಹೀರಾಗಿದೆ. ಇತ್ತೀಚಿನ ಕಾಪರ್ೊರೆಟ್ ಜಗತ್ತಿನಲ್ಲಿ ಸೆಕ್ರೆಟರಿಗಳಾಗಿ ನೇಮಕವಾಗುವವರು 'ಬಾಸ್' ಹೇಳುವ ಯಾವುದೇ ಕೆಲಸಕ್ಕೂ ಸೈ ಎನ್ನಬೇಕು ಮತ್ತು ಅದರ ಮೂಲಕವೇ ಬ್ಯುಸಿನೆಸ್ ಕುದುರಿಸಬೇಕು ಕೂಡ. 'ಎ ಸೂಟಬಲ್ ಬಾಯ್' ಎಂಬ ಸಾಧಾರಣ ಕಾದಂಬರಿ ವಿಶ್ವಮಟ್ಟದಲ್ಲಿ ಮಾರುಕಟ್ಟೆ ಆಕ್ರಮಿಸಲು ಕಾಮಿನಿಯರ ಸಹಾಯ ಪಡೆಯಲಾಗಿತ್ತು ಎಂಬ ಟೀಕೆಯಲ್ಲಿ ಹೊಸದೇನೂ ಇಲ್ಲ. ಪಾಶ್ಚಾತ್ಯ ದೇಶಗಳೇಕೆ, ನಮ್ಮ ಬೆಂಗಳೂರಿನ ಕೆಲವು ಕಛೇರಿಗಳ ಆಂಟೆ ಛೇಂಬರ್ಗಳ ಪೀಠೋಪಕರಣಗಳು ನಡುಮಧ್ಯಾಹ್ನದ ಹೊತ್ತಿನಲ್ಲೇ ಕಿರುಗುಟ್ಟುವ ಸದ್ದುಹೊರಡಿಸುವುದು ಅಲ್ಲಿನ ಪ್ಯೂನ್ಗಳಿಗೆ ಮಾತ್ರವಲ್ಲದೇ ಹೊರಗಿನವರಿಗೂ ತಿಳಿದಿರುವ ಬಹಿರಂಗ ರಹಸ್ಯ! ಬ್ರೌಸಿಂಗ್ ಸೆಂಟರ್ಗಳಲ್ಲಿ 'ಸವಿತಾ ಭಾಭಿ' ಎಂದು ಹೇಳಿದರೆ ಅರ್ಥವಾಗದೇ ಇರುವವರು, ಕಾಪರ್ೊರೇಟ್ ಸೆಕ್ಸ್ ಸೈಟ್ ಗೊತ್ತಿಲ್ಲದವರು, ಬ್ಲೋಜಾಬ್ಗೆ ಡಿಕ್ಷನರಿಗಳಲ್ಲಿ ಅರ್ಥಹುಡುಕುವವರು ನಿಜಕ್ಕೂ ಮೂರ್ಖರೇ!
'ಕವಲು' ಶುಂಠಿಯ ಬೇರಿನಂತೆ ಎತ್ತೆತ್ತೆತ್ತಲೋ ಕರೆದೊಯ್ಯುತ್ತದೆ ನಿಜ. ಆದರೂ ಅದಕ್ಕೊಂದು ಬಂಧ, ಬಿಗಿ, ಹಂದರವಿದೆ. ಅದರ ಪೋಷಣೆಗೆ ಆಥರ್ಿಕ ಪರಿಸರ, ಸಾಮಾಜಿಕ ಬದ್ಧತೆ, ಯಶಸ್ಸಿನ ತಂತ್ರಗಾರಿಕೆ, ಶ್ರಮಜೀವನದ ಸಾರ್ಥಕತೆಯ ಜೀವದ್ರವ್ಯವೂ ಇದೆ. ಹಾದರದ ನಿರೂಪಣೆ ಪ್ರಕ್ಷಿಪ್ತವಷ್ಟೇ! ಎರಡು ಕುಟುಂಬಗಳ ಕಥೆ ಎಂದೆನಿಸಿದರೂ ಅವುಗಳ ಸುತ್ತಲೇ ಇರುವ ಇನ್ನೂ ಕೆಲವರ ಅತಂತ್ರ ಬದುಕಿನ ಚಿತ್ರಗಳು ಅದೇಕೋ ಬಹುತೇಕ ವಿಮರ್ಶಕರಿಗೆ ಕಾಣಿಸುತ್ತಲೇ ಇಲ್ಲ. ಕುಸುರಿ ಕೆಲಸಗಾರ ಸಣ್ಣಪುಟ್ಟ ವಿವರಗಳನ್ನೂ ಸ್ಫುಟಗೊಳಿಸುತ್ತಾನೆ. ಭೈರಪ್ಪನವರು ಕೂಡ ಅದು ಎಷ್ಟೇ ಚಿಕ್ಕ ಪುಟ್ಟ ಪಾತ್ರವಿದ್ದರೂ ಅವುಗಳಿಗೆ ಜೀವತುಂಬಿ, ಅವು ಇರುವಷ್ಟು ಹೊತ್ತು ಅವುಗಳದ್ದೇ ಪರಿಸರದ ಘಮಘಮಿಸುವಿಕೆಯನ್ನು ಸೃಷ್ಟಿಸಿ, ಅಲ್ಲೇ ಮರೆಯಾಗುವ ನಿತ್ಯಪುಷ್ಪಗಳಾಗಿಸುತ್ತಾರೆ. ಅದನ್ನು ಕುರಿತಂತೆ ಯಾರೂ ಗಮನಿಸದಿರುವುದು ಭೈರಪ್ಪನವರಿಗೆ ಬೇಸರ ತರಿಸಿರಬಹುದು. ದೊಡ್ಡ ಕ್ಯಾನ್ವಾಸಿನ ಚಿತ್ರದಲ್ಲಿ ತುಂಬದೇ ಬಿಟ್ಟ ಭಾಗಗಳೇ ಜಾಸ್ತಿ ಎನಿಸಿದರೂ ಆ ರಿಕ್ತತೆಯೇ ಒಂದು ಅರ್ಥ ಒದಗಿಸುವಂತೆ ಹೇಳದೇ ಬಿಟ್ಟ ಮಾತುಗಳಲ್ಲೇ ಕಥೆ ಬೆಳೆಯುತ್ತಾ ಸಾಗುವುದು ಸೋಜಿಗವೇನೂ ಅಲ್ಲ. ಮೌನವೇ ಮಾತಿಗಿಂತ ಹೆಚ್ಚು ಅರ್ಥಕೊಡುವ ಸನ್ನಿವೇಶಗಳನ್ನು, ಸೂಕ್ಷ್ಮತೆಗಳನ್ನು ಕಥನಕಾರನ ದೃಷ್ಟಿಯಿಂದ ನೋಡಿದಾಗ ಪಾತ್ರಗಳ ಮನೋಭೂಮಿಕೆ ಎಂತಹುದೆಂಬುದು ತಿಳಿಯುತ್ತದೆ. ವಿಮರ್ಶಕನೂ ಕೃತಿಕಾರನ ಬೂಟುಗಳಲ್ಲಿ ತನ್ನ ಪಾದಗಳನ್ನು ಊರಿದಾಗ ಮಾತ್ರ ಆತನ ವಿಮಶರ್ೆಗೊಂದು ಅರ್ಥಬಂದೀತು. ಅದನ್ನು ಬಿಟ್ಟು ಕೂರಂಬುಗಳಂತಹ ಮಾತುಗಳಿಂದ ಚುಚ್ಚಿ, ಯಾವುದೋ ಪಂಥಕ್ಕೆ ಕಟ್ಟಿಹಾಕಿಸುವ ಹುನ್ನಾರ ಏನನ್ನೂ ಸಾಧಿಸಲಾರದು.
ಕಥೆಗಾರ ತನ್ನ ಮನೋಲಹರಿ ಬಂದಂತೆ ಏನನ್ನೋ ಒಂದಷ್ಟು ಕಲ್ಪಿಸಿ, ಕಥಾಹಂದರಕ್ಕಿಳಿಸಿ, ಸೂಕ್ತ ಮಾಧ್ಯಮದ ಮೂಲಕ ಪ್ರಕಟಿಸುವುದು ಸಾಮಾನ್ಯ. ಜನಮೆಚ್ಚುವಂತೆಯೇ ಬರೆಯಬೇಕೆಂಬ ಹಪಾಹಪಿಗೆ ಇಳಿದವರ ಯಶಸ್ಸು ಬಹಳಕಾಲ ಬಾಳದು. ತನ್ನ ಇಷ್ಟದ ರುಚಿಗಟ್ಟಿನ ತಿನಿಸನ್ನು ಉಣಬಡಿಸುವವನಿಗೆ ಯಾವಾಗಲೂ ಡಿಮ್ಯಾಂಡ್ ಇದ್ದದ್ದೇ. ಯಶಸ್ಸಿನ ಏರಿಳಿತದಲ್ಲಿ ಗಟ್ಟಿ ಸರಕು ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುತ್ತದೆ. ಮಂಗಳೆ-ಜಯಕುಮಾರ್, ಇಳಾ-ವಿನಯ್ ಸಂಬಂಧಗಳ ಹಿಂದಿನ ಮತ್ತು ಮುಂದಿನ ಘಟನೆಗಳತ್ತಲೇ ಸುತ್ತಿಕೊಂಡಿರುವಂತೆ ತೋರುವ 'ಕವಲು' ಇವೇ ಸಂಬಂಧಗಳ ಕವಲುಗಳಲ್ಲೇ ಸಾಗುತ್ತಾ, ಅಲ್ಲಲ್ಲಿ ಮಿಂಚುವ ಮಾನವೀಯ ಎಳೆಗಳು, ತೋರಿಬರುವ ಭಯಾನಕ ಮುಖಗಳು, ಭೀಬತ್ಸ ದೃಶ್ಯಗಳು, ಸ್ವಾರ್ಥಸಾಧನೆಯೊಂದೇ ಗುರಿ ಎಂದು ಒದರಾಡುವ ಪಕ್ಷಪಾತಿಗಳು, ಮನೋರೋಗಿಗಳಂತೆನಿಸುವ ಎಡಬಡಂಗಿಗಳು, ಜೀವಕಳೆಯೇ ಇಲ್ಲದ ಕೀಲುಗೊಂಬೆಗಳು, ಮಹಾನಗರದಲ್ಲಿನ ದಿಬ್ಬಣದ ದೃಶ್ಯದಂತೆ ಸಾಗಿಹೋಗಿ ಮನರಂಜಿಸಿ ಮರೆಯಾಗಿಬಿಡುತ್ತವೆ. ಪಾತ್ರದ ತುಮುಲವನ್ನು ಅದರ ಭಾಷೆಯಲ್ಲಿಯೇ ವ್ಯಕ್ತಮಾಡುವುದು ಕಾದಂಬರಿಕಾರನ ಪ್ರಬದ್ಧತೆಗೆ ಸಾಕ್ಷಿಯಾಗುತ್ತದೆ. ಗಾಢವಾಗಿ ಕಾಡಲೇಬೇಕೆಂಬ ಮಾನವೀಯ ಪಾತ್ರಗಳ ಸೃಷ್ಟಿ ನಿಜಕ್ಕೂ ಕಷ್ಟವೇ. ಉರಿವ ಮನೆಯ ಗಳ ಹಿರಿಯುವ ಪೋಲೀಸ್, ವಕೀಲೆ, ಫ್ಯಾಕ್ಟರಿ ಕೆಲಸಗಾರರು, ಮಂಗಳೆ ಎಲ್ಲರೂ ಸ್ವಾಥರ್ಿಗಳೇ ಆದರೂ ಅವರಿಗೆ ಅದು ಅನಿವಾರ್ಯ. ಬೇರೆ ದಾರಿ ಏನಿತ್ತು ಅಲ್ಲಿ?
ಭೈರಪ್ಪನವರ ಇತರೆ ಕಾದಂಬರಿಗಳ ಹಿನ್ನೆಲೆಯಲ್ಲಿ, ಇತರೆ ಪಾತ್ರಗಳ ಬೆಳಕಿನಲ್ಲಿ 'ಕವಲು' ಕಾದಂಬರಿಯನ್ನು ನೋಡುವುದು ಸೂಕ್ತವಲ್ಲ. ಭೈರಪ್ಪನವರು ಕಾಲದೊಂದಿಗೇ ಮಾಗಿದ್ದಾರೆ. ಏಳುಬೀಳುಗಳನ್ನು ಕಂಡಿದ್ದಾರೆ. ಅವರ ಕೃತಿಯನ್ನು ಅವರ ವ್ಯಕ್ತಿತ್ವದ ಭಾಗವಾಗಿಯೋ, ನೆರಳಾಗಿಯೋ ನೋಡುವುದು, ಕೃತಿಕಾರನ ಯೋಚನೆಗಳೊಟ್ಟಿಗೇ ತುಲನೆಮಾಡುವುದು ಕೃತಿಗೆ ಮಾಡುವ ಅನ್ಯಾಯ. ಈಗಿನ ಸಮಾಜೋ-ಆಥರ್ಿಕ-ಸಾಂಸ್ಕೃತಿಕ ಪರಿಸರದಲ್ಲಿ ಹಳೆಯದೆಲ್ಲವನ್ನೂ ಬಿಟ್ಟ ಪ್ರಸ್ತುತ ಕೃತಿಕೇಂದ್ರಿತವಾದ ವಿಮಶರ್ೆ ಮಾತ್ರ ಯಾವುದೇ ಕೃತಿಗೆ ಕಾವ್ಯ ನ್ಯಾಯ ಒದಗಿಸಬಲ್ಲುದು. ಸಾಹಿತ್ಯ ಅಭ್ಯಾಸಿಗಳಿಗೆ 'ಪ್ರಾಯೋಗಿಕ ವಿಮಶರ್ೆಗೆ ಒದಗಿಸುವ ಕೃತಿಯಂತೆ' ಲೇಖಕನ ಹೆಸರಿನ ಹಂಗಿಲ್ಲದೇ, ಪೂವರ್ಾಗ್ರಹದ ಛಾಯೆಯಿಲ್ಲದೇ, ಶುದ್ಧ ಕೃತಿ ಕೇಂದ್ರಿತ ವಿಮಶರ್ೆ ಯಾವಾಗ ಬರುತ್ತದೆಯೋ ಆಗ ಲೇಖಕನ ಸೃಜನಶೀಲತೆಗೆ ಕಿರೀಟ ದೊರೆತೀತು. ಕೃತಿಕಾರನ ನೆರಳೇ ಗಾಢವಾಗಿ ಕೃತಿಯ ಮೇಲೆ ಬೀಳಿಸುವ, ಬೆಚ್ಚಿ ಬೀಳುವಂತೆ ವತರ್ಿಸುವ ವಿಮರ್ಶಕರಿಂದ ಕೃತಿಯ ವಿಮೋಚನೆ ಸಾಧ್ಯವಾಗುವ ದಿನಕ್ಕಾಗಿ ಎದುರುನೋಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಭೈರಪ್ಪನವರ 'ಕವಲು' ಕಾದಂಬರಿಯನ್ನು ಕೇವಲ ಒಂದು ಕೃತಿ ಮಾತ್ರವಾಗಿ ಓದುವ ಮನಸ್ಥಿತಿಯವರು ಮಾತ್ರ ಅದನ್ನು ನಿಜವಾಗಿ ಅನುಭವಿಸಬಲ್ಲರು. ಅದರಲ್ಲಿನ ತುಮುಲ, ಸಂಚಲನೆಯನ್ನು ಅರ್ಥಮಾಡಿಕೊಳ್ಳಬಲ್ಲರು.
ಪ್ರಸ್ತುತ ಸಮಾಜದಲ್ಲೊಂದು ಸಂಚಲನವುಂಟುಮಾಡಿರುವ 'ಕವಲು' ಭೈರಪ್ಪನವರಿಗೆ ಇನ್ನಷ್ಟು ಕಸುವು ನೀಡಿ ಪ್ರಖರ ಕೃತಿಗಳನ್ನು ಬರೆಯಲು ಉತ್ಸಾಹತುಂಬಲಿ ಎಂದು ಹಾರೈಸೋಣ.


ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089


Tuesday, July 20, 2010

Children's Literature - Three Books by Thammanna Beegar



Here are three books by Sri Thammanna Beegar, Cartoonist and Writer. These are very useful for children and teachers. A review in Kannada by Bedre Manjunath is here:

ಶಿಕ್ಷಕ, ವ್ಯಂಗ್ಯಚಿತ್ರಕಾರ, ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರರ
ಮಕ್ಕಳ ಸಾಹಿತ್ಯ ಕೃತಿಗಳು

ಜಿಂಕೆಮರಿ (ಮಕ್ಕಳ ಕಥೆಗಳು)
ಜೀಕ್ ಜೀಕ್ (ಮಕ್ಕಳ ಕವನ ಸಂಕಲನ)
ಪುಟಾಣಿ ಪುಡಿಕೆ (ಸಚಿತ್ರ ಮಕ್ಕಳ ಕವನ ಸಂಕಲನ)

ಲೇಖಕರು: ತಮ್ಮಣ್ಣ ಬೀಗಾರ
(9480474629)
ಪ್ರಕಾಶಕರು: ಉದಯ ಪ್ರಕಾಶನ, ಬೆಂಗಳೂರು.

ಮಕ್ಕಳ ಸಾಹಿತ್ಯ ಕನ್ನಡದಲ್ಲಿ ಜನಪ್ರಿಯವಾಗುತ್ತಿರುವುದು ಬಹುತೇಕ ಶಿಕ್ಷಕರಿಂದ ಎಂಬ ಮಾತು ಪ್ರಚಲಿತವಿದೆ. ಬಹುತೇಕ ಉತ್ತರ ಕನರ್ಾಟಕದ ಮಕ್ಕಳ ಸಾಹಿತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿರುವುದು ಇದಕ್ಕೆ ಕಾರಣವಿರಬಹುದು. ಶಿಕ್ಷಕರಿಗೆ ಮಕ್ಕಳೊಂದಿಗೆ ಇರುವ ಒಡನಾಟವೇ ಸಾಂದಭರ್ಿಕ ಸಾಹಿತ್ಯ ಸೃಷ್ಟಿಗೆ ನಾಂದಿ ಹಾಡುತ್ತದೆ. ಯಾವ ಶಿಕ್ಷಕ ನಗುಮುಖದಿಂದ ಮಕ್ಕಳೊಂದಿಗೆ ನಲಿಯುತ್ತಾ ಕಲಿಸುತ್ತಾನೋ ಆತನ ಕಲಿಕೆಯ ವಾತಾವರಣವೇ ಶಿಶುಸ್ನೇಹಿಯಾಗಿ ಮಾರ್ಪಟ್ಟು ಉತ್ತಮೋತ್ತಮ ಪದ್ಯ, ಕಥೆ, ಚಿತ್ರ, ಚಟುವಟಿಕೆಗಳಾಗಿ ಹೊರಹೊಮ್ಮುತ್ತವೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೊಸೂರಿನಲ್ಲಿರುವ ವ್ಯಂಗ್ಯಚಿತ್ರಕಾರ ಹಾಗೂ ಶಿಕ್ಷಕ ತಮ್ಮಣ್ಣ ಬೀಗಾರ ಮಕ್ಕಳ ಜೊತೆ ನಡೆಸಿದ ಆಟ-ಪಾಠವೇ ಬರಹಕ್ಕಿಳಿದು ಆರೇಳು ಕೃತಿಗಳಾಗಿ ಹೊರಹೊಮ್ಮಿವೆ.
'ಮುಗ್ಧ ಮನಸ್ಸಿಗೆ ಮುದ ನೀಡುವ ಮುಕ್ತಕಗಳು' ಎಂದು ಡಾ. ಸೈಯದ್ ಜéಮೀರುಲ್ಲಾ ಷರೀಫ್ರಿಂದ ಮುಕ್ತವಾಗಿ ಹೊಗಳಿಸಿಕೊಂಡ ಸಚಿತ್ರ ಮಕ್ಕಳ ಕವನ ಸಂಕಲನ 'ಪುಟಾಣಿ ಪುಡಿಕೆ', 'ಶುದ್ಧವಾದ ಭಾಷೆ, ಶುದ್ಧವಾದ ಲಯ; ಆರೋಗ್ಯವಂತ ದೃಷ್ಟಿಕೋನ, ಮಕ್ಕಳಿಗೆ ಪ್ರಿಯವಾಗಬಹುದಾದ ಪ್ರಾಣಿಪಕ್ಷಿ ಪ್ರಪಂಚ' ಎಂದು ಎಚ್.ಎಸ್. ವೆಂಕಟೇಶಮೂತರ್ಿ ಅವರಿಂದ ಶಹಬ್ಬಾಸ್ಗಿರಿ ಗಿಟ್ಟಿಸಿರುವ ಮಕ್ಕಳ ಕವನ ಸಂಕಲನ 'ಜೀಕ್ ಜೀಕ್', 'ಮಕ್ಕಳ ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಉತ್ಸಾಹ, ಸಹಸ್ಪಂದನ, ಮೌಲ್ಯ ಕಲ್ಪನೆ, ಬದುಕಿನಲ್ಲಿ ಭರವಸೆ, ಬದಲಾವಣೆಗೆ ಹೊಂದಿಕೊಳ್ಳುವ ಶಕ್ತಿ ಮೊದಲಾದ ಅಂಶಗಳನ್ನು ಒಳ್ಳೆಯ ಕಥೆಗಳ ಮೂಲಕ ಬಿತ್ತಲು ಸಾಧ್ಯ' ಎಂಬ ಎನ್. ಶ್ರೀನಿವಾಸ ಉಡುಪ ಅವರ ನಲ್ನುಡಿಯನ್ನು ಹೊಂದಿರುವ ಸಚಿತ್ರ ಮಕ್ಕಳ ಕಥಾ ಸಂಕಲನ 'ಜಿಂಕೆಮರಿ' ಇವು ತಮ್ಮಣ್ಣ ಬೀಗಾರರ ಸೃಜನಶೀಲತೆಗೆ ಸಾಕ್ಷಿಯಾಗಿವೆ.
'ಕಡಲೆಕಾಳು, ಶೇಂಗಾಬೀಜಾನೆಲ್ಲಾ ಕುರುಕುರು ತಿಂತೀರಲ್ಲಾ ಹಾಗೇ ಹಾಡನ್ನು ಬಾಯಿ ತೆರೆದು ಹಾಡ್ತಾ ಹೋಗಲು' ಪ್ರೇರೇಪಿಸುವ ಪುಟಾಣಿ ಪುಡಿಕೆ ಸಂಕಲನದಲ್ಲಿ 52 ಪುಟ್ಟ ಮತ್ತು ದೊಡ್ಡ ಪದ್ಯಗಳಿವೆ. (ಪುಟಗಳು: 72, ಬೆಲೆ: ರೂ. 60/-) ಶಿಶುಗೀತೆಗಳೇ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಈ ಪುಟಾಣಿ ಪುಡಿಕೆಗಳು ಮಕ್ಕಳನ್ನು ಆಕಷರ್ಿಸುವಲ್ಲಿ ಅನುಮಾನವಿಲ್ಲ. ಬಾಯ್ದೆರೆ ಆಟಗಳನ್ನು ಆಡಿಸುವ ಸಂದರ್ಭಗಳಲ್ಲಿ, ಹಾಡಿನ ಬಂಡಿ, ಪದಗಳ ಬಂಡಿ ಹೇಳಿಸುವಾಗ ಈ ಪುಟ್ಟ ಪದ್ಯಗಳನ್ನು ಬಳಸಿಕೊಳ್ಳಬಹುದು. ಆಟ, ಓಟ, ಊಟ, ಕಾಟ, ತುಂಟಾಟ, ಚಳಿ, ಮೊದಲಾದ ಮಕ್ಕಳ ಸಹಜ ಮನೋವೃತ್ತಿಯನ್ನು, ಸ್ವಾತಂತ್ರ್ಯಪ್ರಿಯತೆಯನ್ನು ತೋರಿಸುವ ಪದ್ಯಗಳೇ ಸಾಕಷ್ಟಿವೆ. ಶಿಕ್ಷಕರು ಮತ್ತು ಪೋಷಕರು ಪ್ರೀತಿಯಿಂದ ತೆಗೆಸಿಕೊಟ್ಟರೆ ಮಕ್ಕಳು ಖಂಡಿತಾ ಓದುತ್ತಾರೆ.
'ಜೀಕ್ ಜೀಕ್' ಸಂಕಲನದಲ್ಲಿನ 32 ಪದ್ಯಗಳಲ್ಲಿ ಪ್ರಾಣಿ, ಪಕ್ಷಿ, ತಿಂಡಿ, ಮಳೆ, ಕತೆ ಎಲ್ಲವೂ ಇವೆ. ಕವಿ ಎಚ್.ಎಸ್. ವೆಂಕಟೇಶ ಮೂತರ್ಿಯವರ ಪದ್ಯಗಳ ಗಾಢಛಾಯೆ ಅಲ್ಲಲ್ಲಿ ಇಣುಕಿದೆ. (ಪುಟಗಳು: 56, ಬೆಲೆ: ರೂ. 40/-) ಪದ್ಯಗಳಾಗಿ ಹಾಡಿಸಲು ಪ್ರಾಸ ಇರಲೇಬೇಕೆಂಬ ಹಠತೊಟ್ಟು ಬರೆಯಲು ಹೋದಂತಿದೆ. ತಿಂಡಿ ಪ್ರಾಸಗಳು ಎಂಬ ಪುಟ್ಟ ಪದ್ಯಗಳಲ್ಲಿನ 'ಪುರಿ' ಎಂಬುದು ಪೂರಿ ಎಂಬ ತಿಂಡಿಗೆ ಸಂಬಂಧಿಸಿದ್ದು ಬಹುಶಃ ಕಣ್ತಪ್ಪಿನಿಂದ 'ಪುರಿ' ಎಂದಾಗಿದೆಯೇ? ಗೊತ್ತಿಲ್ಲ. ಪುರಿ - ಕಡಲೆ ಪುರಿ, ಮಂಡಕ್ಕಿ, ಪೂರಿ - ಮೈದಾ ಮತ್ತು ಗೋಧಿ ಹಿಟ್ಟಿನಿಂದ ಮಾಡಿ ಎಣ್ಣೆಯಲ್ಲಿ ಕರಿದ ತಿಂಡಿ. ಇದು 'ಪುರಿ'ಯೋ 'ಪೂರಿ'ಯೋ ಮಕ್ಕಳಿಗೆ ಬಗೆಹರಿಯದ ಸಮಸ್ಯೆ!
'ಹೀಗೊಂದು ಮದುವೆ' ಪದ್ಯದಲ್ಲಿ 'ಸೂರ್ಯಗೆ ಚಂದಿರ ಹೆಂಡತಿ ಎಂದು ಮಕ್ಕಳ ನಗುವು ಹರೆಯುತ್ತೆ' ಎಂಬ ಕಲ್ಪನೆ ಇದೆ. ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ ಸೂರ್ಯ ಗಂಡು ಮತ್ತು ಚಂದಿರ (ಲೂನಾ) ಹೆಣ್ಣು. ಹಾಗಾಗಿ ಚಂದಿರನನ್ನು 'ಷಿ'(ಆಕೆ) ಎಂದೇ ಕರೆದ ಇಂಗ್ಲಿಷ್ ಪದ್ಯಗಳನ್ನು ಕಲಿಯುವ ಕನ್ನಡದ ಮಕ್ಕಳಿಗೆ ಚಂದಾಮಾಮನನ್ನು ಹೆಣ್ಣಾಗಿ ಕಲ್ಪಿಸಿಕೊಳ್ಳುವುದು ಕಷ್ಟ! ಮಕ್ಕಳಿಗಾಗಿ ಬರೆಯುವಾಗ ಪಾಶ್ಚಾತ್ಯ ಸಾಹಿತಿಗಳು ಅಗಾಧಪ್ರಮಾಣದ ಸಂಶೋಧನೆ, ಸರಳ ಭಾಷಾ ಪ್ರಯೋಗಗಳನ್ನು ನಡೆಸಿದ ನಂತರವಷ್ಟೇ ಬರೆಯುತ್ತಾರಂತೆ. ನಮ್ಮಲ್ಲಿ ಆ ಪರಿಶ್ರಮ, ಪ್ರತಿಫಲ ಎರಡೂ ಕಡಿಮೆಯೇ!
ಶಾಲೆ, ಹಳ್ಳಿ, ಗುಡ್ಡ, ಕಣಿವೆ, ಕಾಡು, ಜನಪದದ ಪರಿಸರಕ್ಕೆ ಹೊಂದಿಕೊಂಡಂತೆ, ಯಾವುದೇ ರಾಜ-ರಾಣಿ-ಗುಲಾಮರ ಗೋಜಿಲ್ಲದಂತೆ, ಬದಲಾಗುತ್ತಿರುವ ಮಾನವರ ಧೋರಣೆಗಳು, ಸ್ವಾರ್ಥ, ದ್ರೋಹಚಿಂತನೆಗಳ ಮಧ್ಯೆಯೂ ಅಲ್ಲಲ್ಲಿ ಇಣುಕುವ ಮಾನವೀಯತೆ, ಕಕ್ಕುಲತೆ, ಸಹಾಯ ಮಾಡುವ ಪ್ರವೃತ್ತಿಗಳನ್ನು ಚಿಕ್ಕ ಚೊಕ್ಕ 15 ಕಥೆಗಳ ಮೂಲಕ ಮಕ್ಕಳನ್ನು ತಲುಪುವ ಪ್ರಯತ್ನವೇ ಜಿಂಕೆ ಮರಿ - ಮಕ್ಕಳ ಕಥಾ ಸಂಕಲನ. (ಪುಟಗಳು: 92, ಬೆಲೆ: ರೂ. 65/-) ಎನ್. ಶ್ರೀನಿವಾಸ ಉಡುಪ ಅವರ ಅಚ್ಚುಕಟ್ಟಾದ ವಿಮಶರ್ಾತ್ಮಕ ನಲ್ನುಡಿ ಕಥಾಸಂಕಲನದ ಆಶಯವನ್ನು ಹಿಡಿದಿಟ್ಟಿದೆ. ಒಂದೊಂದು ಕಥೆಯೂ ಒಂದೊಂದು ಮೌಲ್ಯವನ್ನು, ಸಾಹಸವನ್ನು, ಪರಿಸರಪ್ರೇಮವನ್ನು ವ್ಯಕ್ತಪಡಿಸುತ್ತದೆ. ಇಲ್ಲಿನ ಕಥೆ ಪುಟ್ಟ ಪುಟಾಣಿಯಿಂದ ಹಿಡಿದು ಹೈಸ್ಕೂಲ್ವರೆಗಿನ ಮಗುವನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿರುವುದರಿಂದ ಅಲ್ಲಲ್ಲಿ ಭಾಷೆಯ ಬಳಕೆಯಲ್ಲಿ ವ್ಯತ್ಯಾಸ ತೋರುತ್ತದೆ. ನಿರೂಪಕನಾಗಿ ದೊಡ್ಡವರು ಓದಿ ಮಕ್ಕಳಿಗೆ ಹೇಳುವಂತೆ ರಚಿತವಾಗಿದ್ದರೆ ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಪ್ರಮೇಯವಿರುವುದಿಲ್ಲ. ಆದರೆ ಮಕ್ಕಳೇ ಓದುವಂತೆ, ಅವರ ಕೈಗೆ ಕೊಡುವಾಗ ಪ್ರತಿಯೊಂದು ಪದವೂ ಸುಲಭ-ಕಠಿಣ ಎನ್ನುವ ಪರುಷಮಣಿಯನ್ನು ಹಾಯ್ದುಬರಬೇಕಾಗುತ್ತದೆ. ಬಹುತೇಕ ಮಕ್ಕಳ ಕಥೆಗಾರರು ಈ ಅಂಶದ ಕಡೆಗೆ ಗಮನಕೊಡಬೇಕಾದ ಅಗತ್ಯವಿದೆ.
ಒಟ್ಟಿನಲ್ಲಿ ತಮ್ಮಣ್ಣ ಬೀಗಾರರ ಕಥೆ, ಕವನ, ಮುಕ್ತಕಗಳು ಮುದ್ದಾಗಿವೆ. ಇನ್ನಷ್ಟು ಪರಿಶ್ರಮ ಮತ್ತು ಪರಿಷ್ಕಾರದಿಂದ ಅತ್ಯುತ್ತಮ ಕೃತಿಗಳು ಹೊರಬರುವ ಎಲ್ಲ ಸಾಧ್ಯತೆಗಳು ಈ ಕೃತಿಗಳಲ್ಲಿ ವ್ಯಕ್ತವಾಗಿವೆ. ಶಿಕ್ಷಕರು ಮತ್ತು ಮಕ್ಕಳ ಕೈಗೆ ತಮ್ಮಣ್ಣ ಬೀಗಾರರ ಈ ಕೃತಿಗಳು ಸಿಕ್ಕು ಅವರ ಬಾಯಲ್ಲಿ ಪದ್ಯಗಳು ನಲಿದಾಡಲಿ, ಕತೆಗಳು ಚಿಟ್ಟೆಗಳಂತೆ ಹಾರಾಡಲಿ.

ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089

Monday, April 19, 2010

2012 Pralaya - Three Books to Create Awareness regarding the Big Hoax Pralaya 2010

Maha Pralaya 2012 ?

Pralaya 2012 - A Book to Create Awareness regarding the Big Hoax Pralaya 2010

by Dr. S. Balachandra Rao

Hon'ble Director, Gandhian Studies Centre, Bharateeya Vidya Bhavan, Bangalore
Published by Bharat Gyan Vigyan Samithi (BGVS), Karnataka, Bangalore - 560 012
Price: Rs.20/-

ಪ್ರಳಯ 2012 ಎಂಬ ಬೌದ್ಧಿಕ ಪ್ಲೇಗ್ ವಿಶ್ಲೇಷಿಸುವ ಮೂರು ಕೃತಿಗಳು

ಕೃತಿ : ಪ್ರಳಯ 2012
ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣ ರಾವ್
ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕನರ್ಾಟಕ, ಬೆಂಗಳೂರು.
ಪುಟಗಳು : 36 ಬೆಲೆ : ರೂ. 10-00

ಕೃತಿ : ಮಹಾಪ್ರಳಯ 2012
ಲೇಖಕರು : ಡಾ. ಎಸ್. ಬಾಲಚಂದ್ರರಾವ್
ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕನರ್ಾಟಕ, ಬೆಂಗಳೂರು.
ಪುಟಗಳು : 56 ಬೆಲೆ : ರೂ. 20-00

ಕೃತಿ : 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ?
ಲೇಖಕರು : ಶ್ರೀಕಾಂತ್ ವಿ. ಬಲ್ಲಾಳ್
ಪ್ರಕಾಶಕರು : ಸಪ್ತಗಿರಿ ಪ್ರಕಾಶನ, ಮನವತರ್ಿಪೇಟೆ, ಬೆಂಗಳೂರು.
ಪುಟಗಳು : 56 ಬೆಲೆ : ರೂ. 20-00


ಕಳೆದ ಎರಡು ದಶಕಗಳಿಂದ ಕನರ್ಾಟಕದಲ್ಲಿ ಜ್ಞಾನ ವಿಜ್ಞಾನ ಪ್ರಸಾರದಲ್ಲಿ ಸಕ್ರಿಯವಾಗಿರುವ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾಲಕಾಲಕ್ಕೆ ವಿದ್ಯಾಥರ್ಿಗಳ, ಶಿಕ್ಷಕರ ಮತ್ತು ಜನಸಾಮಾನ್ಯರ ಅಗತ್ಯಕ್ಕೆ ತಕ್ಕ ಮಾರ್ಗದಶರ್ಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಜಾಗೃತಿ ಉಂಟುಮಾಡುವ ಉಪಯುಕ್ತ ಕೃತಿಗಳನ್ನು ಪ್ರಕಟಿಸಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿದೆ. ಗ್ರಹಣಗಳ ಸಂದರ್ಭದಲ್ಲಿ ಗ್ರಹಣೋತ್ಸವದ ಕನ್ನಡಕ ಮತ್ತು ಪುಸ್ತಕಗಳನ್ನು ಹೊರತಂದು ಮೂಢನಂಬಿಕೆಯ ವಿರುದ್ಧ ಸಮರ ಸಾರುವ ಹಲವು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದೆ. ಇದೀಗ ಮಹಾಮಾರಿಯಂತೆ ಕಾಡುತ್ತಿರುವ ಬೌದ್ಧಿಕ ಪ್ಲೇಗ್ 'ಪ್ರಳಯ 2012' ಕ್ಕೆ ಮದ್ದು ಅರೆಯುವ ಸಲುವಾಗಿ ಖ್ಯಾತ ವಿಜ್ಞಾನಿಗಳಿಂದ ಸುಲಭ ಬೆಲೆಯ ಸರಳ ನಿರೂಪಣೆಯ ಪುಸ್ತಕಗಳನ್ನು ಪ್ರಕಟಿಸಿದೆ.
ಪ್ರಳಯ ಕುರಿತಂತೆ ಹತ್ತಾರು ಪುಸ್ತಕಗಳೂ ಜನರ ಕೈಯಿಂದ ಕೈಗೆ ಬದಲಾಗುತ್ತಲೇ ಇವೆ. ಇದೀಗ ತಾನೇ ಮಾರುಕಟ್ಟೆಗೆ ಪ್ರವೇಶಿಸಿರುವ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ, ಪ್ರೊ. ಎಚ್. ಆರ್. ರಾಮಕೃಷ್ಣ ರಾವ್ ಅವರ ಪ್ರಳಯ-2012, ಡಾ. ಎಸ್. ಬಾಲಚಂದ್ರರಾವ್ ಅವರ ಮಹಾಪ್ರಳಯ 2012? ಮತ್ತು ಸಪ್ತಗಿರಿ ಪ್ರಕಾಶನ ಪ್ರಕಟಿಸಿರುವ ಶ್ರೀಕಾಂತ್ ವಿ. ಬಲ್ಲಾಳ್ ಅವರ 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ? ಕೃತಿಗಳು ವಸ್ತುನಿಷ್ಠವಾಗಿ ಪ್ರಳಯದ ವಿಶ್ಲೇಷಣೆ ಮಾಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.
ಪ್ರೊ. ಎಚ್. ಆರ್. ರಾಮಕೃಷ್ಣರಾಯರು ಪ್ರಳಯ-2012 ಕೃತಿಯಲ್ಲಿ ವೈಜ್ಞಾನಿಕವಾದ ಸತ್ಯವನ್ನು ಸಾಕ್ಷ್ಯಾಧಾರಗಳನ್ನು ವಿಶ್ಲೇಷಣೆಗಳೊಂದಿಗೆ ಮಂಡಿಸಿದರೆ, ಡಾ. ಎಸ್. ಬಾಲಚಂದ್ರರಾವ್ ಅವರು ಪುರಾತನ ಭಾರತೀಯ ಖಗೋಳ ವಿಜ್ಞಾನದ ಹಿನ್ನೆಲೆಯನ್ನು, ಗಣಿತಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ಅಗತ್ಯವೆನಿಸಿದ ಟಿಪ್ಪಣಿಗಳೊಂದಿಗೆ ಮಹಾಪ್ರಳಯ-2012? ಕೃತಿ ರಚಿಸಿಕೊಟ್ಟಿದ್ದಾರೆ. ಶ್ರೀಕಾಂತ್ ಬಲ್ಲಾಳರ ಕೃತಿ, ಪುರಾಣ, ಇತಿಹಾಸ, ಐತಿಹ್ಯ, ಜ್ಯೋತಿಷ ಹೀಗೆ ಎಲ್ಲಾ ಸರಕನ್ನೂ ತಗಲಿಸಿಕೊಂಡು 'ಕುದುರೆಗಿಂತ ಲದ್ದಿ ಬಿರುಸು' ಎನಿಸುವಂತೆ ಮಾಡಿ, ಸತ್ಯಯುಗವೆಂಬ ಒಳ್ಳೆಯ ಸಮಯ ಬಂದುಬಿಟ್ಟರೆ ಜ್ಯೋತಿಷಿಗಳಿಗೆ, ಭವಿಷ್ಯಕಾರರಿಗೆಲ್ಲಾ ಕೆಲಸವಿರುತ್ತಾ? ಎಂಬ ಪ್ರಶ್ನೆಯನ್ನು ಕೇಳಿ ಮಾಯನ್ ಕ್ಯಾಲೆಂಡರಿನಂತೆ ಸುಮ್ಮನಾಗಿಬಿಡುತ್ತದೆ! ಡಾ. ಬಾಲಚಂದ್ರರಾಯರ ಕೃತಿ ಇತಿಹಾಸ, ಪುರಾಣ, ನಂಬಿಕೆಗಳು ಮತ್ತು ವೈಜ್ಞಾನಿಕ ಕಾರಣಗಳನ್ನು ಆಳವಾಗಿ ವಿಶ್ಲೇಷಿಸಿ, ಅಂತಿಮವಾಗಿ ಪ್ರಳಯ ಅನ್ನುವ ಕಲ್ಪನೆಯೇ ಸುಳ್ಳು ಎಂದು ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಮಾಹಿತಿಯ ವಿಶ್ಲೇಷಣೆ ಎಂತಹವರಿಗೂ ಸುಲಭವಾಗಿ ಅರ್ಥವಾಗುವಂತಿದೆ.
ಈ ಮೂರೂ ಕೃತಿಗಳಲ್ಲಿ ನಮ್ಮ ನಂಬುಗೆಯನ್ನು ಪ್ರಶ್ನಿಸುವ, ಗಟ್ಟಿಗೊಳಿಸುವ ಮತ್ತು ಅಹುದಹುದೆನ್ನುವಂತೆ ಮಾಡುವ ಕೆಲವು ಅಂಶಗಳಿವೆ. ವಿವಿಧ ಮೂಲಗಳಿಂದ ಆಯ್ದುಕೊಂಡಿರುವ ಮಾಹಿತಿ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಕೇವಲ ವಿಷಯಗಳನ್ನು ಮಂಡಿಸಿ, ತಕರ್ಿಸಿ, ತೀಮರ್ಾನವನ್ನು ತೆಗೆದುಕೊಳ್ಳಲು ನಮಗೇ ಸೂಚಿಸುವ ಕೃತಿಗಳು ಬೇಗನೇ ಕಣ್ಮರೆಯಾಗುತ್ತವೆ. ನಿದರ್ಿಷ್ಟ ಪರಿಹಾರದ ಮಾರ್ಗ ತೋರಿಸಲು ನಿದರ್ಿಷ್ಟತೆಯೇ ಪ್ರಶ್ನಿಸಲ್ಪಡುವ ಸಂದರ್ಭವಿರುವುದರಿಂದ ಅದು ಆಗದ ಮಾತು. ಕಾಲ ಎಂಬುದು ಸಾಪೇಕ್ಷವಾದದ್ದು. ಕಾಲದ ಅಳತೆಯೂ ಸಾಪೇಕ್ಷವೇ. ಮಾನವಕುಲದ ಇತಿಹಾಸವೆಂಬುದು ಕಾಲಚಕ್ರದಲ್ಲಿ ಮೂಡಿಬಂದಿರುವ ಕೆಲವು ಹೆಜ್ಜೆಗುರುತುಗಳಷ್ಟೇ. ಅವರವರ ಭಾವಕ್ಕೆ, ಅವರವರಿಗೆ ಸರಿದೋರಿದಂತೆ, ಈ ಹೆಜ್ಜೆಗುರುತುಗಳ ವಿಶ್ಲೇಷಣೆ ನಡೆದಿದೆ, ಅಷ್ಟೇ!
ಮಾಯನ್ ಕ್ಯಾಲೆಂಡರ್ ಎಂಬ ಅಮೂರ್ತ ಕಲ್ಪನೆಯನ್ನು ಮೂರ್ತರೂಪಕ್ಕೆ ತಂದು ಅರ್ಧ ಶತಮಾನವೂ ಕಳೆದಿಲ್ಲ. ತಿಂಗಳಿಗೆ ಕೇವಲ 20 ದಿನಗಳಿದ್ದ ಈ ಕ್ಯಾಲೆಂಡರ್, ಕ್ರಿಸ್ತ ಶಕೆ ಪ್ರತಿಪಾದಿಸಿರುವ ಗ್ರೆಗರಿಯನ್ ಕ್ಯಾಲೆಂಡರ್ ಮತ್ತು ಶಾಲಿವಾಹನ ಶಕೆ, ವಿಕ್ರಮ ಶಕೆ, ಹಿಜರಿ ಶಕೆ, ಇತ್ಯಾದಿ ಜಗತ್ತಿನಾದ್ಯಂತ ಇರುವ ನೂರಾರು ಕ್ಯಾಲೆಂಡರುಗಳನ್ನು ಒಂದೆಡೆ ಇಟ್ಟುಕೊಂಡು ಪರಸ್ಪರ ತಾಳೆ ನೋಡಿದರೆ ಸಾಪೇಕ್ಷ ಕಾಲದ ಅಳತೆಯನ್ನು ಎಷ್ಟು ಸಮಗ್ರವಾಗಿ ಗ್ರಹಿಸಲು ಸಾಧ್ಯ ಎಂಬುದು ತಿಳಿಯುತ್ತದೆ. ಒಂದೊಂದರದ್ದೂ ಒಂದೊಂದು ದಿಕ್ಕು! ಆಯಾ ಕಾಲಘಟ್ಟಗಳಲ್ಲಿ, ಸ್ಥಳೀಯ ಅನುಕೂಲತೆಗೆ ಅನುಗುಣವಾಗಿ ರಚಿತವಾಗಿರುವ ಈ ಕಾಲಗಣಕಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೂ ಅವೆಲ್ಲವೂ 2012, ಡಿಸೆಂಬರ್ 21 ಎಂಬದೇ ಪ್ರಳಯದ ದಿನವೆಂದು ಕರಾರುವಾಕ್ಕಾಗಿ ನಿರ್ಧರಿಸುವಲ್ಲಿ ಖಂಡಿತಾ ಯಶಸ್ವಿಯಾಗಲಾರವು!
2012 ರಲ್ಲಿ ಪ್ರಳಯ - ಯುಗಾಂತಂ - ಎಲ್ಲವೂ ವಿನಾಶ - ಎಂಬ ಅವೈಜ್ಞಾನಿಕ ಪರಿಕಲ್ಪನೆಯನ್ನು ಎಷ್ಟು ಹೆಚ್ಚಿನ ಮಟ್ಟದಲ್ಲಿ ಸಾಧ್ಯವೋ ಅಷ್ಟರ ಮಟ್ಟಿಗೆ ವ್ಯಾವಹಾರಿಕವಾಗಿ ಬಳಸಿಕೊಳ್ಳಲು ಆರಂಭವಾಗಿ ದಶಕಗಳೇ ಕಳೆದಿವೆ. 1999 ರ ಮೇನಲ್ಲಿ ಪ್ರಳಯ ಆಗಿಯೇ ಬಿಡುತ್ತದೆ ಎಂಬ ಹುಸಿ ನುಡಿಗಳನ್ನು ನಂಬಿ ಪ್ರಾಣತ್ಯಾಗ ಮಾಡಿದ ರೇಲಿಯೆನ್ಸ್ ಪಂಗಡದ ಸದಸ್ಯರಿಗಿಂತ ಮೂಖರ್ಾತಿಮೂರ್ಖರು ಈಗ ಹೊಸದಾಗಿ ನಮ್ಮ ನಡುವೆ ಹುಟ್ಟಿಬಿಟ್ಟಿದ್ದಾರೆ! ದಿನಾ ಬೆಳಗ್ಗೆ, ರಾತ್ರಿ ಮೂರ್ಖರ ಪೆಟ್ಟಿಗೆಯಲ್ಲಿ ತೌಡುಕುಟ್ಟುತ್ತಲೇ ಇದ್ದಾರೆ! ಪತ್ರಿಕೆಗಳಿಗಂತೂ ಇದೊಂದು ರುಚಿಕರ ಖಾದ್ಯ! ಹಿಮಪರ್ವತಗಳಲ್ಲಿ ಉತ್ಪಾತ ಉಂಟಾಗುತ್ತದೆ ಎಂಬ ಊಹೆಗೆ ಸೊಪ್ಪು ಹಾಕದ ಅಲ್ಲಿನ ಜನ ನಿರುಮ್ಮಳರಾಗಿ, ನೆಮ್ಮದಿಯ ನಿದ್ದೆ ಮಾಡುತ್ತಿದ್ದರೆ ಕನರ್ಾಟಕದ ಕೆಲವು ಟಿ.ವಿ. ಚಾನೆಲ್ಲುಗಳು ಮಾತ್ರ ಪ್ರತಿ ರಾತ್ರಿ ಪ್ರಳಯದ ತುರಿಕೆ ಬರಿಸಿ, ನಿದ್ದೆಯೋಡಿಸುವ ಸಂಕಲ್ಪ ಮಾಡಿದಂತಿವೆ!
ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ಪರ-ವಿರೋಧದ ಹೇಳಿಕೆಗಳು ಪ್ರಕಟವಾಗುತ್ತಲೇ ಇವೆ. ಹೋರಾಶಾಸ್ತ್ರಿಗಳು, ಚೌಕಾಬಾರದ ಸಂಖ್ಯಾಶಾಸ್ತ್ರಿಗಳು, ಪಂಚಾಂಗದ ಪಟಾಲಂ ಲ್ಯಾಪ್ಟಾಪ್ ಇಟ್ಟುಕೊಂಡು ದಿವ್ಯದರ್ಶನದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೆ ಅವುಗಳನ್ನು ಖಂಡಿಸುತ್ತಾ, ಇದಮಿತ್ಥಂ ಎಂಬುದನ್ನು ತೋರಿಸಿಕೊಡಲು ವೈಜ್ಞಾನಿಕ ಚಿಂತಕರು, ವಿಜ್ಞಾನಿಗಳು, ಖಗೋಳಜ್ಞರು ವಿವರಣೆ ನೀಡಲು ಪದಗಳಿಗಾಗಿ ಹುಡುಕಾಡುತ್ತಿದ್ದಾರೆ. ಹೋಮ-ಹವನ-ಪುರಸ್ಕಾರಗಳಂತಹ ವೈದಿಕ ಆಚರಣೆಗಳಿಗೂ, ಪ್ರಾರ್ಥನೆ, ಬಲಿ, ಕೋಲಗಳಂತಹ ಪ್ರಾದೇಶಿಕ ವೈವಿಧ್ಯಕ್ಕೂ ಈ ವ್ಯಾಧಿಯ ವಿಸ್ತರಣೆಯಾಗಿದೆ. ಪ್ರಳಯ ತಡೆಯಲು ಸಾಧ್ಯವಿಲ್ಲವಾದ್ದರಿಂದ ಬದುಕಿ ಉಳಿಯಲು ಹೊಸ ಮಾರ್ಗ ಹುಡುಕುವ ಮಾಗರ್ಾನ್ವೇಶಕರ ತಂಡಗಳೇ ವಿತಂಡವಾದದಲ್ಲಿ ಮುಳುಗಿವೆ! ಡಾ. ಬಾಲಚಂದ್ರರಾವ್ ಅವರು ಈ ಚಾನೆಲ್ಲುಗಳ ವಿರುದ್ಧ ಸಮರಸಾರಿದ್ದರೆ, ಪ್ರೊ. ರಾಮಕೃಷ್ಣರಾವ್ ಅವರು ಜನರನ್ನು ವೈಜ್ಞಾನಿಕ ಚಿಂತನೆಯೆಡೆಗೆ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಈ ಮೂರೂ ಕೃತಿಗಳು 2012ರಲ್ಲಿ ಅಂತಹ ವಿಶೇಷವಾದದ್ದು ಏನೂ ಆಗದು ಎನ್ನುವದನ್ನು ಘೋಷಿಸಲು ತಮ್ಮ ತಮ್ಮ ಆಧಾರಗ್ರಂಥಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದರ ಆಧಾರದಲ್ಲಿ ರಾಜ್ಯ, ರಾಷ್ಟ್ರದಾದ್ಯಂತ ಚಚರ್ೆಗಳು ನಡೆದು ಮೂರ್ಖರ ಪೆಟ್ಟಿಗಳಲ್ಲಿ ಬರುವ ಅರ್ಥಹೀನ ಬ್ರಹ್ಮಾಂಡ ಕಾರ್ಯಕರ್ಮಗಳನ್ನು ಓಡಿಸಬೇಕಾಗಿದೆ.
ಜೀವಿಗಳ ಶರೀರದಲ್ಲಿ ಪ್ರತಿ ಕ್ಷಣವೂ ಕೋಟಿಗಟ್ಟಲೇ ಜೀವಕೋಶಗಳು ಸಾಯುತ್ತವೆ ಮತ್ತು ಅದಕ್ಕೂ ಹೆಚ್ಚು ಸಂಖ್ಯೆಯ ಹೊಸ ಜೀವಕೋಶಗಳು ಹುಟ್ಟುತ್ತವೆ. ಕ್ಷಣ ಕ್ಷಣವೂ ಜೀವಕೋಶಗಳಿಗೆ ಪ್ರಳಯವೇ! ಪ್ರಳಯದಿಂದಲೇ ಹೊಸ ಹುಟ್ಟು, ಬೆಳವಣಿಗೆ! ಹಳೆಯ ಚಿಂತನೆಗಳ ಮೇಲೆ ಹೊಸ ಚಿಂತನೆಗಳ ಲೇಪ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು. ಹೊಸ ತತ್ವದೊಡನೆ ವಿಜ್ಞಾನ ಕಲೆ ಮೇಳವಿಸಿದರೆ ಜೀವನ ಸಾರ್ಥಕವಾಗುತ್ತದೆ ಎನ್ನುವ ಕಗ್ಗದ ನುಡಿಯೇ ದಾರಿದೀಪ.
ಜಗತ್ತು ಹೊಸ ವಿಜ್ಞಾನದ ಹೊಸ್ತಿಲಲ್ಲಿದೆ. ಪ್ರಗತಿಯ ಹಾದಿಯ ಪಯಣ ಸುದೀರ್ಘವಾದರೂ ಆನಂದದಾಯಕವಾದದ್ದು. ಅನಗತ್ಯವಾದ, ಜೀವ ವಿರೋಧಿ, ವಿನಾಶದ ಚಿಂತೆಗಳಿಂದ ವಿಚಲಿತರಾಗದೆ, ಬರುವ ಕಠಿಣ ಸವಾಲುಗಳನ್ನು ಎದುರಿಸುವ ಸಿದ್ಧತೆಗಳನ್ನು ಮಾಡಿಕೊಂಡು, ವಿಜ್ಞಾನದ ಭದ್ರ ಬುನಾದಿಯ ಮೇಲೆ ಮಾನವತೆಯ ಕಟ್ಟಡ ಕಟ್ಟುವ ಪ್ರಯತ್ನ ಸಾಗಬೇಕಾಗಿದೆ. ಅದಕ್ಕೆಂದೇ ಹಲವು ಪ್ರಾಜ್ಞರು ದುಡಿಯುತ್ತಲೂ ಇದ್ದಾರೆ. ಸುಮ್ಮನಿರಲಾದರೆ ಇರುವೆ ಬಿಟ್ಟುಕೊಂಡವರಂತೆ ಸಮೂಹ ಸನ್ನಿಗೊಳಗಾಗಿ ಹುಯಿಲೆಬ್ಬಿಸುವ ಧೂರ್ತರ ಹುನ್ನಾರಗಳಿಗೆ ಬಲಿಯಾಗದೆ, ಯತಾರ್ಥ ಏನೆಂದು ಗ್ರಹಿಸಿ, ದೃಢಮನಸ್ಸಿನಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ಪ್ರಗತಿಪರ ಕೆಲಸಗಳಲ್ಲಿ ತೊಡಗಿ, ದೆವ್ವನ ಕಾಖರ್ಾನೆಯಾಗಬಹುದಾದ ಖಾಲಿತಲೆಯನ್ನು ಒಳ್ಳೆಯ ವಿಚಾರಗಳಿಂದ ತುಂಬಿ, ಕ್ರಿಯಾಶೀಲ ಚೇತನವನ್ನಾಗಿಸಿದರೆ ಯಾವ ಪ್ರಳಯವೂ ಬಾಧಿಸದು. ಸುಮ್ಮನೇ ಹುಯಿಲೆಬ್ಬಿಸುವ ಪ್ರಳಯದ ಕಲಿಗೆ ಕಲಿಯುಗ ವಿಪರೀತರಾಗುವ ಸಂದರ್ಭ ಇದು.
ಪ್ರಳಯವೆಂಬ ಯಕಃಶ್ಚಿತ್ ಸಂಶಯ ಕೀಟವನ್ನು ನಿವಾರಿಸಲು ಅಧ್ಯಯನವೆಂಬ ದಿವ್ಯೌಷಧಿಯೇ ಬೇಕು. ವಿಶ್ವ ರಹಸ್ಯದ ಕೀಲಿಕೈ ಹುಡುಕುತ್ತಿರುವ ಈ ಹೊತ್ತಿನಲ್ಲಿ ಇಲ್ಲದ್ದನ್ನು ಕುರಿತು ಚಿಂತಿಸದೆ, ನಾವೇ ಹುಡುಕಿ, ಸೃಷ್ಟಿ ಕ್ರಿಯೆ ಅರ್ಥಕಂಡುಕೊಳ್ಳಲು ನೆರವಾಗುವ ವೈಜ್ಞಾನಿಕ ಸಾಹಿತ್ಯ, ವಿಶ್ಲೇಷಣೆಗಳನ್ನು ಅಧ್ಯಯನ ಮಾಡೋಣ, ಜ್ಞಾನ ವಿಜ್ಞಾನ ಸಮಿತಿಯ ಪ್ರಯತ್ನಕ್ಕೆ ಶುಭಕೋರೋಣ, ಅಲ್ಲವೇ?
ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089