Monday, November 22, 2010

Saturday, November 20, 2010

Sting Operation - Detective Story by Yajnavalkya - Thushara Monthly - December 2010

http://issuu.com/BedreManjunath/docs/sting_operation_-_detective_story_in_thushara_dec_


Sting Operation - Detective Story by Yajnavalkya
Thushara Monthly - December 2010
Thank You Editors

Review of Na Disouza's short story - Katheyondara Eradu Mukha - in Mayura Monthly - December 2010

 Soft Copy Images
Scanned Images
Review of Na Disouza's short story
Katheyondara Eradu Mukha
in Mayura Monthly - December 2010
Thank You Editors

Thursday, November 11, 2010

Kannada Lipi Vikasa - A wonderful work on Kannada Script - by Dr M G Manjunath and G K Devaraja Swamy



                 ಕನ್ನಡ ಬರಹದ ಸ್ಥಿತ್ಯಂತರಗಳ ದಾಖಲಿಸುವ ಕನ್ನಡ ಲಿಪಿ ವಿಕಾಸ

                    ಕೃತಿ                : ಕನ್ನಡ ಲಿಪಿ ವಿಕಾಸ
                    ಲೇಖಕರು        : ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ
                    ಪ್ರಕಾಶಕರು      : ಜಗದುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ
                                             ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ                            
                      ಪುಟಗಳು        : 332            ಬೆಲೆ : ರೂ. 150-00

    ಕನ್ನಡ ಲಿಪಿ ವಿಕಾಸವು ಒಂದು ರೀತಿಯಲ್ಲಿ ಭಾರತೀಯ ಲಿಪಿಶಾಸ್ತ್ರದ ಅಧ್ಯಯನದ ಬೃಹತ್ ವ್ಯಾಪ್ತಿಯನ್ನು ಹೊಂದಿದೆ.  ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪ್ರಚಲಿತವಿದ್ದ ಬಹುತೇಕ ಎಲ್ಲಾ ಲಿಪಿಗಳನ್ನು ಕುರಿತ ಅಧ್ಯಯನ ಇಲ್ಲಿ ನಡೆದಿದೆ....ಶಾಸನಾಧ್ಯಯನಕ್ಕೆ  ಸಂಬಂಧಿಸಿದ ಮಹತ್ವದ ವಿಚಾರಗಳನ್ನು, ಭಾರತ ಮತ್ತು ಕನರ್ಾಟಕಗಳಲ್ಲಿ ಶಾಸನಾಧ್ಯಯನ ನಡೆದು ಬಂದ ಬಗೆಯ ಪರಿಚಯ ಇಲ್ಲಿದೆ.... ಮಣ್ಣಿನಿಂದ ಪ್ರಾರಂಭಿಸಿ ಕಾಗದದವರೆಗೆ ಬಳಸಲಾಗಿರುವ ವಿವಿಧ ಸಾಮಗ್ರಿಗಳು ದಾಖಲೆೆಗೊಂಡಿರುವ ಮಹತ್ವದ ವಿಚಾರಗಳನ್ನು ಪರಿಶೀಲಿಸಿ ಪರಿಚಯಿಸಲಾಗಿದೆ.... ಬೀಜರೂಪದ ಬರವಣಿಗೆಯಿಂದ ಎಲಮೈಟ್ ಲಿಪಿಯವರೆಗಿನ ಲಿಪಿವಿಕಾಸದ ಹಂತಗಳನ್ನು, ವಿವಿಧ ನಾಗರೀಕತೆಗಳಿಗೆ ಸಂಬಂಧಿಸಿದ ಬರಹ ರೂಪಗಳನ್ನು, ವಿಶೇಷವಾಗಿ ಸಿಂಧೂ ಸಂಸ್ಕೃತಿಯ ಬರಹಗಳನ್ನು ಪರಿಚಯಿಸಲಾಗಿದೆ.... ಅಶೋಕನ ಬ್ರಾಹ್ಮೀ ಲಿಪಿಯಿಂದ ಪ್ರಾರಂಭಿಸಿ ಮೈಸೂರು ಒಡೆಯರ ಕಾಲದ ಲಿಪಿಯವರೆಗೆ ಎಲ್ಲಾ ಕಾಲಘಟ್ಟದ ಲಿಪಿ ಸ್ವರೂಪಗಳನ್ನೂ, ಕಾಗುಣಿತಗಳ ಸಹಿತ ನೀಡಲಾಗಿದೆ..... ಶಾಸನಾಭ್ಯಾಸಿಗಳ ಅನುಕೂಲಕ್ಕಾಗಿ ಅರವತ್ತಮೂರು ಶಾಸನಗಳ ಚಿತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪಠ್ಯವನ್ನು ನೀಡಿ ಗ್ರಂಥಕರ್ತರು ಉಪಕರಿಸಿದ್ದಾರೆ.... ಅನುಬಂಧದಲ್ಲಿ ಕನರ್ಾಟಕವನ್ನಾಳಿದ ಬಹುತೇಕ ಎಲ್ಲಾ ರಾಜವಂಶಗಳ ವಂಶಾವಳಿಯನ್ನು ಅವರ ಆಳ್ವಿಕೆಯ ಕಾಲದೊಂದಿಗೆ ನೀಡಿದ್ದಾರೆ.  ನಂತರದ ಭಾಗದಲ್ಲಿ ಸಂವತ್ಸರ, ಮಾಸ, ತಿಥಿ ಇತ್ಯಾದಿ ಪಂಚಾಂಗದ ವಿವರಗಳನ್ನು ನೀಡಿ ಕೃತಿಯ ಉಪಯುಕ್ತತೆಯನ್ನು ಹೆಚ್ಚಿಸಿದ್ದಾರೆ, ಎನ್ನುವ ಪ್ರಸಿದ್ಧ ಹಿರಿಯ ಶಾಸನತಜ್ಞ, ಕನರ್ಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ. ಹೆಚ್. ಎಸ್. ಗೋಪಾಲರಾವ್ ಅವರ ಮುನ್ನುಡಿ ಪ್ರಸ್ತುತ ಕೃತಿಯ ಹಿರಿಮೆಯನ್ನು ಬೀಜರೂಪದಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
    ಕನ್ನಡ ಭಾಷೆಯನ್ನು ಅಭಿಜಾತ ಭಾಷೆಯೆಂದು ಕರೆಯುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಲಿಪಿಯ ಬಗ್ಗೆ ಆಗಿರುವ ಸಂಶೋಧನೆಯ ಕುರಿತಾದ ಗ್ರಂಥವೊಂದು ತೆಲುಗುನಾಡಿನಿಂದ ಪ್ರಕಟವಾಗಿ ಕಣ್ತೆರೆಸುತ್ತಿದೆ.  ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನವಿರುವ ಮಂತ್ರಾಲಯದ ಮಠದಿಂದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳಲ್ಲಿ 93ನೇ ಪುಷ್ಪವಾಗಿ ಪ್ರಕಟವಾಗಿರುವ ಕನ್ನಡ ಲಿಪಿ ವಿಕಾಸ ಎಂಬ ಅಪರೂಪದ ಕೃತಿ ಈಗ ಲಭ್ಯವಾಗುತ್ತಿಲ್ಲ.  ಮರುಮುದ್ರಿಸಲು ಯಾರಾದರೂ ಮುಂದೆಬಂದಾರೆಯೇ?
    ಕನ್ನಡ ಎಂ.ಎ., ಪುರಾತತ್ತ್ವಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರದ ಪ್ರಮುಖ ಆಕರ ಗ್ರಂಥವಾಗಿರುವ ಹಾಗೂ ಶಾಸನ ಸಂಶೋಧಕರಿಗೆ ಅಗತ್ಯವಾಗಿರುವ ಈ ಗ್ರಂಥ ಸಕಲ ರೀತಿಯಿಂದಲೂ ಉತ್ಕೃಷ್ಟವಾಗಿದೆ. ಕನ್ನಡ ಲಿಪಿಶಾಸ್ತ್ರ ಎಂಬ ಹೊತ್ತಗೆ ರಚಿಸಿದ ಡಾ. ಎಂ.ಜಿ. ಮಂಜುನಾಥ ಮತ್ತು ಜಿ.ಕೆ. ದೇವರಾಜಸ್ವಾಮಿ ಅವರು ಅದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಹತ್ತುವರ್ಷಗಳ ಸಂಶೋಧನೆಯ ಫಲ ಈ ಕನ್ನಡ ಲಿಪಿ ವಿಕಾಸ.
    ಮುನ್ನುಡಿ ಬೆನ್ನುಡಿಗಳ ಹೊರತಾಗಿ ಒಟ್ಟು ಇಪ್ಪತ್ತೆಂಟು ಅಧ್ಯಾಯಗಳು ಮತ್ತು ನಾಲ್ಕು ಅನುಬಂಧ ಟಿಪ್ಪಣಿಗಳನ್ನು ಹೊಂದಿರುವ  ಕನ್ನಡ ಲಿಪಿ ವಿಕಾಸ ಕೃತಿಯಲ್ಲಿ ಕನ್ನಡ ಲಿಪಿಯ ಜೊತೆ ಕನರ್ಾಟಕದಲ್ಲಿ ಲಭಿಸಿರುವ ಬ್ರಾಹ್ಮೀ, ದೇವನಾಗರಿ, ನಂದಿನಾಗರಿ, ಗ್ರಂಥ, ಅರವ, ವಟ್ಟೆಳತ್ತು, ತಿಗಳಾರಿ, ತುಳು, ತೆಲುಗು, ಶಂಕು ಲಿಪಿ, ಮೋಡಿ ಬರಹ ಇತ್ಯಾದಿಗಳ ಸಾಂದಭರ್ಿಕ ಅಧ್ಯಯನವಿದೆ.  ಕನ್ನಡ ಅಂಕೆಗಳ ವಿಕಾಸಕ್ಕೂ ಪ್ರತ್ಯೇಕ ಅಧ್ಯಾಯವಿದೆ.  ಮಣ್ಣು, ಕಲ್ಲು, ಕಬ್ಬಿಣ, ಚಿನ್ನ, ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ, ಮರ, ಚರ್ಮ, ಸ್ಫಟಿಕ, ಶಂಕು, ಭೂರ್ಜಪತ್ರ, ತಾಳೆಗರಿ, ಕಡತ, ಕಾಗದ, ಸೀಸ, ಆನೆಯದಂತ, ಪ್ರಾಣಿಗಳ ಮೂಳೆಗಳು, ಮರದ ಎಲೆಗಳಲ್ಲಿ ಮೂಡಿರುವ ಲಿಪಿಗಳ ದಾಖಲೆ ಇತಿಹಾಸದ ಬಗ್ಗೆ ಆಸಕ್ತಿ ಹುಟ್ಟಿಸುವ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
    ಬೀಜರೂಪದ ಬರವಣಿಗೆ, ವಿಗ್ರಹರೂಪ ಮತ್ತು ತಾಂತ್ರಿಕ ಬರವಣಿಗೆ, ಚಿತ್ರಲಿಪಿ, ಭಾವಲಿಪಿ, ಅಂತರಾವಸ್ಥೆಯ ಲಿಪಿ, ಕ್ರೀಟನ್ ಲಿಪಿ, ಹೆಟ್ಟೈಟ್ ಲಿಪಿ, ಸುಮೇರಿಯನ್ ಲಿಪಿ, ಧ್ವನಿಲಿಪಿ, ಶಬ್ದಾತ್ಮಕ ಲಿಪಿ, ಹೈರೋಗ್ಲಿಫಿಕ್ ಲಿಪಿ, ಹೈರಾಟಿಕ್ ಲಿಪಿ, ಡಿಮೋಟಿಕ್ ಲಿಪಿ,  ಎಲಮೈಟ್ ಲಿಪಿ, ಕ್ಯೂನಿಫಾರಂ ಲಿಪಿಗಳ ಪ್ರಸ್ತಾಪದೊಂದಿಗೆ ವರ್ಣಮಾಲೆಯ ಉಗಮದ ಇತಿಹಾಸವನ್ನು ವಿವರವಾಗಿ ತಿಳಿಸಲಾಗಿದೆ.  ಜೈನಸೂತ್ರಗಳಲ್ಲಿ ಉಲ್ಲೇಖಿಸಿರುವ ಹದಿನೆಂಟು ಲಿಪಿಗಳು, ಬೌದ್ಧಗ್ರಂಥವಾದ ಲಲಿತ ವಿಸ್ತಾರದಲ್ಲಿ ಕೊಟ್ಟಿರುವ ಅರವತ್ತನಾಲ್ಕು ಲಿಪಿಗಳು, ವಿದೇಶಿ ಲಿಪಿಗಳು, ಬುಡಕಟ್ಟು ಲಿಪಿಗಳು, ಜನಾಂಗೀಯ ಲಿಪಿ, ಚಿತ್ರಲಿಪಿ, ಗೂಢಲಿಪಿ, ಕೊರೆಯಲ್ಪಟ್ಟ ಲಿಪಿ, ಅಲಂಕಾರಿಕ ಲಿಪಿ, ಶೀಘ್ರಲಿಪಿ, ಗ್ರಂಥಲಿಪಿ, ಗಣಿತದ ವಿಶೇಷ ಲಿಪಿ, ಅಮಾನುಷ / ಕಾಲ್ಪನಿಕ ಲಿಪಿಗಳನ್ನು ಚುಟುಕಾಗಿ ವಿವರಿಸಲಾಗಿದೆ.
    ಶಾಸನ ಸಂಪಾದನೆಯ ವಿಧಿ ವಿಧಾನಗಳು ಅಧ್ಯಾಯದಲ್ಲಿ ಪಡಿಯಚ್ಚು ತೆಗೆಯುವ ವಿಧಾನಗಳು ಮತ್ತು ಅವುಗಳಿಗೆ ಬೇಕಾದ ಸಾಮಗ್ರಿಗಳನ್ನು ಕುರಿತ ವಿಸ್ತೃತ ವಿವರಣೆಯಿದೆ.  ಶಾಸನಗಳಲ್ಲಿ ಕಾಲಗಣನೆ ಅಧ್ಯಾಯದಲ್ಲಿ ಕಲಿಯುಗ ಸಂವತ್ಸರ, ಸೃಷ್ಟಿಗತಾಬ್ದ ವರ್ಷ,  ಶಾಲಿವಾಹನ ಶಕ ಸಂವತ್ಸರ, ವಿಕ್ರಮ ಶಕೆ, ಚಾಲುಕ್ಯ ವಿಕ್ರಮ ಶಕೆ, ಬಿಜ್ಜಳ ಶಕೆ, ಮಹಾವೀರ ಸಂವತ್ಸರ, ಹಿಜಿರ ಶಕೆ, ಸಾಂಕೇತಿಕ ಕಾಲಗಣನೆಯ ವಿವರಗಳಿವೆ. ಸೃಷ್ಟಿಯು ಒಂದು ಸಾವಿರದ ಒಂಬೈನೂರ ಐವತ್ತೈದು ಕೋಟಿ ಐವತ್ತೆಂಟು ಲಕ್ಷ ಎಂಬತ್ತಮೂರು ಸಾವಿರದ ಒಂದು ನೂರಾ ಎರಡರಲ್ಲಿ (1955,58,83,102) ಆರಂಭವಾಯಿತೆಂಬ ನಂಬಿಕೆ ಇದೆ ಎನ್ನುವ ಉಲ್ಲೇಖ ಓದುಗರನ್ನು ಚಕಿತಗೊಳಿಸುತ್ತದೆ.
    ...ದೇಶದೆಲ್ಲೆಡೆ ಅರಳಿದ್ದ, ಅರಳಿದ್ದರೂ ಜನಮಾನಸಕ್ಕೆ ಗೋಚರವಾಗದೆ ಗುಪ್ತವಾಗುಳಿದಿದ್ದ ಹಲವಾರು ಅಪೂರ್ವ ಗ್ರಂಥಕುಸುಮಗಳನ್ನು ಆಯ್ದು ತಂದು ಪೋಣಿಸಿದ ಶ್ರೀ ರಘುನಂದನ ರಾಘವೇಂದ್ರಮಾಲಾದ 101 ಪುಸ್ತಕಗಳ ವೈಜಯಂತಿ ಜ್ಞಾನವೃಕ್ಷವನ್ನು ಅಲುಗಾಡಿಸುವ ಕಿರು ಪ್ರಯತ್ನವಾಗಿದೆ.  ಕೆಳಗೆ ಬಿದ್ದ ಫಲ ಹಾಗೂ ಪುಷ್ಪಗಳು ಜಿಜ್ಞಾಸುಗಳ ಹೃನ್ಮನೋಮಂದಿರಗಳನ್ನು ಅಲಂಕರಿಸಿದರೆ ಸಾಹಿತ್ಯಕೃಷಿಕರ ಶ್ರಮ ಸಾರ್ಥಕವಾದೀತು... ಎನ್ನುವ ರಾಜಾ ಎಸ್. ರಾಜಗೋಪಾಲಾಚಾರ್ಯರ ಆಪ್ತನುಡಿಗಳು ಈ ಕನ್ನಡ ಲಿಪಿ ವಿಕಾಸ ಕೃತಿಗೆ ಭೂಷಣವಾಗಿವೆ.  ಶಿಕ್ಷಣಾಸಕ್ತರು, ಭಾಷಾಭ್ಯಾಸಿಗಳು ಒಮ್ಮೆ ಇದನ್ನು ಖಂಡಿತಾ ಓದಬೇಕು.
                                                                                                                       ಕೃತಿಪರಿಚಯ - ಯಾಜ್ಞವಲ್ಕ್ಯ
                                                

Kannada Lipi Vikasa - A wonderful work on Kannada Script
by Dr M G Manjunath and G K Devaraja Swamy

Chicken Mesh Artist Ivan Lovatt - Article in Sudha Magazine - 18 Nov 2010

    ಮನಸೆಳೆಯುವ ಚಿಕನ್ ವೈಯರ್ ಕಲಾಕೃತಿಗಳು


    ಕಲೆಯನ್ನು ಬಿಂಬಿಸುವ ನೂತನ ಮಾಧ್ಯಮಕ್ಕಾಗಿ, ವಿನೂತನ ಪ್ರಕಾರಕ್ಕಾಗಿ ಕಲಾವಿದರೆಲ್ಲರೂ ಸತತ ಹುಡುಕಾಡ ನಡೆಸುತ್ತಿರುತ್ತಾರೆ, ಪ್ರಯೋಗಶೀಲರಾಗಿರುತ್ತಾರೆ.  ಕಟ್ಟಡ ಕಟ್ಟುವಾಗ, ಬೃಹತ್ ಪ್ರಮಾಣದ ಪ್ಲಾಸ್ಟರ್ ಶಿಲ್ಪಗಳನ್ನು ತಯಾರಿಸುವಾಗ ಟೊಳ್ಳು ಮಾದರಿ ರಚಿಸಿಕೊಳ್ಳಲು ಬಳಸಲಾಗುತ್ತಿದ್ದ ಚಿಕನ್ ಮೆಷ್ ಅಥವಾ ಚಿಕನ್ ವೈಯರ್ ನನಗೆ ಆಸಕ್ತಿ ಕೆರಳಿಸಿತು.  ಅದನ್ನೇ ಬಳಸಿ ಪ್ರಾಣಿ, ಪಕ್ಷಿ, ವನ್ಯಜೀವಿಗಳನ್ನು ರಚಿಸಿದೆ.  ವಿಶ್ವವಿಖ್ಯಾತ ಕಲಾವಿದರು, ಸಾಹಸಿಗಳು, ಜಗತ್ಪ್ರಸಿದ್ಧ ವ್ಯಕ್ತಿಗಳ ವಯರ್ ಕಲಾಕೃತಿಗಳನ್ನು ನಿಮರ್ಿಸಿದೆ.  ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಾದರೂ ಮನಸ್ಸಿಗೆ ತೃಪ್ತಿ ತರುವ ಕೆಲಸವಾಗಿದೆ, ಎನ್ನುತ್ತಾನೆ ವಿಶ್ವವಿಖ್ಯಾತ ಮೆಷ್ ವೈಯರ್ ಕಲಾವಿದ ಇವಾನ್ ಲೊವಾಟ್ (ತಚಿಟಿ ಐಠತಚಿಣಣ).
    ಕೀನ್ಯಾದ ನೈರೋಬಿಯಲ್ಲಿ ಜನಿಸಿದ ಇವಾನ್ ಲೊವಾಟ್ ಆಫ್ರಿಕಾ, ಜರ್ಮನಿ, ವೇಲ್ಸ್ ಮತ್ತು ಇಂಗ್ಲೆಂಡ್ಗಳಲ್ಲಿ ಕೆಲಸಮಾಡಿ 1994 ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಹಿಂಟರ್ಲೆಂಡ್ನಲ್ಲಿ ಪತ್ನಿ (ಏಪ್ರಿಲ್) ಮತ್ತು ಪುತ್ರ (ಜೇಮ್ಸ್) ಜೊತೆ ವಾಸಿಸುತ್ತಿದ್ದಾರೆ.   1994 ರಲ್ಲಿ ಮೊದಲ ಬಾರಿಗೆ  ಗ್ರಂಥಮ್ ಗಿಲ್ಡ್ ಹಾಲ್ನಲ್ಲಿ ಚಿತ್ರಗಳು ಹಾಗೂ ಮೆಷ್ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ ಲೊವಾಟ್ ಪ್ರಪಂಚದ ಹಲವು ಸ್ಪಧರ್ೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದಾರೆ.  2004 ರಿಂದ ಈಚೆಗೆ ಭಾಗವಹಿಸಿರುವ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಕಲಾಕೃತಿಗಳ ಪ್ರದರ್ಶನಗಳಲ್ಲಿ ಪ್ರಥಮ ಬಹುಮಾನ ಗಳಿಸಿರುವ ಲೊವಾಟ್ಗೆ ವನ್ಯಜೀವಿಗಳ ಮೆಷ್ ಶಿಲ್ಪಗಳನ್ನು ರಚಿಸುವುದೆಂದರೆ ತುಂಬಾ ಇಷ್ಟ.  ಸರ್ ಎಡ್ಮಂಡ್ ಹಿಲರಿ, ಮೈಕೆಲ್ ಜಾಕ್ಸನ್, ಬೀಟ್ಲ್ ಹಾಡುಗಾರರು, ಸಾಲ್ವಡಾರ್ ಡಾಲಿ ಮೊದಲಾದ ಜನಪ್ರಿಯ ವ್ಯಕ್ತಿಗಳ ಮೆಷ್ ಶಿಲ್ಪಗಳು ಜನಪ್ರಿಯವಾಗಿವೆ.  ಇವರ ಹಲವಾರು ಕಲಾಕೃತಿಗಳು ವಿಶ್ವದಾದ್ಯಂತ ಖಾಸಗಿ ಸಂಗ್ರಹಾಲಯಗಳಲ್ಲಿ ಸೇರ್ಪಡೆಗೊಂಡಿವೆ.
    ಹೆಚ್ಚಿನ ಮಾಹಿತಿ ಮತ್ತು ಚಿಕನ್ ಮೆಷ್ ಕಲಾಕೃತಿಗಳಿಗಾಗಿ ಈ ವೆಬ್ಸೈಟ್ಗಳನ್ನು ಭೇಟಿಮಾಡಬಹುದು: 
www.ivanlovattsculpture.com

Tuesday, November 9, 2010

Rekkeya Mitraru - Winged Friends - M Y Ghorpade - Kannada Translation by Shantha Nagaraj and P S Geetha

Rekkeya Mitraru - Winged Friends - M Y Ghorpade
Kannada Translation by Shantha Nagaraj and P S Geetha
Rs.100/-
(Review will appear soon)

Naanu Sahasodyamai Aagabeku - Vithal Venkatesh Kamath - Kannada Translation by Akshatha Deshpande

Naanu Sahasodyamai Aagabeku - Vithal Venkatesh Kamath
Kannada Translation by Akshatha Deshpande
(Book Review will appear soon)

Book Review - Idli, Orchid, Atmabala of Vittala Venkatesh Kamath








Book Review
Idli, Orchid, Atmabala
of Vittala Venkatesh Kamath
Review by Bedre Manjunath