Sunday, October 31, 2010

Amrutha Cinema Sambhrama - A Compendium of Articles on the Saga of Kannada Film Industry by Srinivasa Prasad of AIR Chitradurga

Amrutha Cinema Sambhram
A Compendium of Articles on the Saga of Kannada Film Industry 
by Srinivasa Prasad of AIR Chitradurga


Published by Dhatri Pustaka
No.170, 3rd 'C' Cross, Vinayaka Layout, Nagarabavi 2nd Stage,
Bangalore - 560 072, Ph. 080-23586717
Price: Rs.100/

ಅಮೃತ ಸಿನಿಮಾ ಸಂಭ್ರಮವೆಂಬ ಕರ್ಣರಸಾಯನ

ಕೃತಿ                    : ಅಮೃತ ಸಿನಿಮಾ ಸಂಭ್ರಮ         
ಲೇಖಕರು            : ಶ್ರೀನಿವಾಸ ಪ್ರಸಾದ್                                            
ಪ್ರಕಾಶಕರು         : ಧಾತ್ರಿ ಪ್ರಕಾಶನ, ವಿಜಯನಗರ, ಬೆಂಗಳೂರು                            
ಪುಟಗಳು             : 164        ಬೆಲೆ : ರೂ. 100-00

    ಕನ್ನಡ ಭಾಷೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಮೊದಲಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವ ಪ್ರಯತ್ನ ಆಗಾಗ್ಗೆ ನಡೆಯುತ್ತಾ ಬಂದಿದೆ.  ಕನ್ನಡ ವಿಶ್ವಕೋಶ ಮತ್ತು ಇತರೆ ಸಂದರ್ಭ ಗ್ರಂಥಗಳಲ್ಲಿ ಆಯಾಯ ಕಾಲದ ದಾಖಲೆಗಳು ಅಚ್ಚುಕಟ್ಟಾಗಿ ಕ್ರೋಢೀಕರಿಸಲ್ಪಟ್ಟಿವೆ.  ಇದೇ ವರ್ಷ ಚಲನಚಿತ್ರ ರಂಗದ ರಾಷ್ಟ್ರಪ್ರಶಸ್ತಿ ಗಳಿಸಿರುವ ಸಿನಿಮಾಯಾನ, ಕಲಾರಂಗದ ಸಹಸ್ರಾರು ವರ್ಷಗಳ ಮೈಲುಗಲ್ಲುಗಳನ್ನು ದಾಖಲಿಸುವ ಕನರ್ಾಟಕ ಕಲಾದರ್ಶನ ದಂತಹ ಕೆಲವೇ ಕೃತಿಗಳು ಸಾರ್ವಕಾಲಿಕ ದಾಖಲೆಯಾಗಿ ಉಳಿಯುತ್ತವೆ.  ಈ ಸಾಲಿಗೆ ಕನ್ನಡ ರಾಜ್ಯೋತ್ಸವದಂದು ಸೇರ್ಪಡೆಯಾದ ಅಪರೂಪದ ಕೃತಿ ಶ್ರೀನಿವಾಸ ಪ್ರಸಾದ್ ಅವರ ಅಮೃತ ಸಿನಿಮಾ ಸಂಭ್ರಮ.  ಮೂರು ಗಂಟೆಗಳೊಳಗೇ ಮೂರು ತಲೆಮಾರುಗಳ ಕತೆ ಹೇಳಿ ಮುಗಿಸುವ ಸಿನಿಮಾದ ಕಥೆ ಹೇಳುವ ಸುದೀರ್ಘ ಕರ್ಣರಸಾಯನವೇ ಈ ಅಮೃತ ಸಿನಿಮಾ ಸಂಭ್ರಮ. 
    ಸಿನಿಮಾ ಕನಸುಗಳನ್ನು ಮಾರುವವರ, ನಂಬುವವರ, ಕೊಳ್ಳುವವರ ಲೋಕ. ಸಿನಿಮಾ ಎಂದರೆ ಬೆಳ್ಳಿ ತೆರೆಯ ಮೇಲಿನ ತಾಕಲಾಟ.  ನಮ್ಮದೇ ಕಥೆಯನ್ನು, ಕನಸನ್ನು ರಂಜನೀಯವಾಗಿ, ಕೆಲವೊಮ್ಮೆ ಅತಿರಂಜನೀಯವಾಗಿ ಹೇಳುವ ಪ್ರಯತ್ನ........ ಆತ್ಮ ಸಂತೋಷಕ್ಕೆ, ಮನೋರಂಜನೆಗೆ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಹೀಗೆ ನೂರೆಂಟು ಮಾಧ್ಯಮಗಳಿದ್ದಾವೆ.  ಆದರೆ ಇವೆಲ್ಲವನ್ನು ಅಷ್ಟಿಷ್ಟು ಹದವಾಗಿ ಬೆರೆಸಿ ಪಂಡಿತ ಪಾಮರರೆಲ್ಲರನ್ನು ಮರಳು ಮಾಡಿದ್ದು ಸಿನಿಮಾ ಎಂಬ ಮಾಯೆ...., ಹೀಗೆ ಆರಂಭವಾಗುತ್ತದೆ ಸಿನಿಮಾ ಲೋಕದ ಎಪ್ಪತ್ತೈದು ವರ್ಷಗಳ ಸಾಧನೆಯ ಕಥೆ.
    ಇವಳು ಯಾರು ಬಲ್ಲೆಯೇನು?..... ಎಂಬ ಹಾಡಿನ ಸಾಲಿನಿಂದ ಕನ್ನಡ ಚಲನ ಚಿತ್ರರಂಗದ ಎಪ್ಪತ್ತೈದು ವರ್ಷಗಳ ಸಾಧನೆಯ ಮೈಲುಗಲ್ಲುಗಳನ್ನು ಪರಿಚಯಿಸುತ್ತಾ ಸಾಗುವ ಶ್ರೀನಿವಾಸ ಪ್ರಸಾದರ ಈ ಅಮೃತ ಸಿನಿಮಾ ಸಂಭ್ರಮ ಕೃತಿ ಕನ್ನಡದ ಹಲವು ನಿತ್ಯ ಹರಿದ್ವರ್ಣ ಚಿತ್ರಗೀತೆಗಳ ಮೊದಲ ಸಾಲುಗಳನ್ನು ಶೀಷರ್ಿಕೆಯಾಗಿಸಿಕೊಂಡಿರುವ ಮೂವತ್ತಕ್ಕೂ ಹೆಚ್ಚು ಅಧ್ಯಾಯಗಳಲ್ಲಿ ಕರಿಯನ್ನು ಕನ್ನಡಿಯಲ್ಲಿ ಹಿಡಿದಂತೆ ಚಿತ್ರರಂಗದ ಸಾಧನೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ.  ಪ್ರತಿಯೊಂದು ಅಧ್ಯಾಯವೂ ನೂರಾರು ಚಿತ್ರಕಲಾವಿದರ ಸಾಧನೆಯ ವಿವಿಧ ಮಜಲುಗಳ ವಿವರಗಳನ್ನು, ಕುತೂಹಲಕಾರಿ ಸಂಗತಿಗಳನ್ನು, ಅಪರೂಪದ ನೆನಪುಗಳನ್ನು ದಾಖಲಿಸುತ್ತಲೇ ಚಿತ್ರರಂಗ ಕಂಡ ಏಳು-ಬೀಳುಗಳನ್ನು ಕೂಡ ತೋರಿಸಿಕೊಟ್ಟಿದೆ.  ಕೆಲವೊಂದು ಶೀಷರ್ಿಕೆ ಗೀತೆಗಳು ಆಯಾ ಅಧ್ಯಾಯದಲ್ಲಿ ವಿವರಿಸಲಾಗಿರುವ ಕಲಾವಿದರ ಕಲಾಸಾಧನೆಯ ಪ್ರತಿಮೆಯಾಗಿವೆ.  ನಾನೇ ರಾಜಕುಮಾರ.... ಎಂಬ ಸುದೀರ್ಘ ಅಧ್ಯಾಯ ಕನ್ನಡದ ಕಣ್ಮಣಿ ಅಣ್ಣಾವ್ರನ್ನ ಕಣ್ಣಮುಂದೆ ಕಟೆದು ನಿಲ್ಲಿಸುತ್ತದೆ.
    ಸತೀ ಸುಲೋಚನಾ 1933ರಲ್ಲಿ ಬಿಡುಗಡೆಯಾಗಿ ಕನ್ನಡದ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಅದಕ್ಕೂ ಮೊದಲೇ ತಯಾರಿಕೆ ಆರಂಭಿಸಿ, ಸೆನ್ಸಾರ್ ಆಗಿದ್ದ ಭಕ್ತಧ್ರುವ ಚಿತ್ರ 1934 ರಲ್ಲಿ ತೆರೆಕಂಡಿದ್ದರಿಂದ ಮೊದಲ ಸ್ಥಾನ ಕಳೆದುಕೊಳ್ಳಬೇಕಾಯಿತು   ಎಂಬ ದಾಖಲೆಯ ಅಂಶ, ಕನ್ನಡ ವೃತ್ತಿ ರಂಗಭೂಮಿ ಮತ್ತು ಸಿನಿಮಾದ ಕಲಾವಿದರು ಪರಸ್ಪರ ಸಹಕಾರದಿಂದ ನಿಮರ್ಿಸಿದ ಚಿತ್ರಗಳ ಯಶಸ್ಸಿನ ಕಥೆಯೊಂದಿಗೆ ಮದರಾಸಿನಿಂದ ಸ್ಯಾಂಡಲ್ವುಡ್ಗೆ ಕನ್ನಡ ಸಿನಿಮಾ ತಂತ್ರಜ್ಞಾನ, ಸಂಗೀತ, ಛಾಯಾಗ್ರಹಣ, ಸಂಸ್ಕರಣೆ ಇತ್ಯಾದಿ ತಾಂತ್ರಿಕ ಅಂಶಗಳು ಹಂತಹಂತವಾಗಿ ಬೆಳೆದುಬಂದ ದಾಖಲೆ ನೀಡುತ್ತದೆ.  
    ಅಮೃತ ಸಿನಿಮಾ ಸಂಭ್ರಮ ಕನ್ನಡ ಚಿತ್ರರಂಗದ ಸಮಗ್ರ ಇತಿಹಾಸವಲ್ಲ ಎಂಬ ಮಾತನ್ನು ಮೊದಲಿಗೇ ಸ್ಪಷ್ಟಪಡಿಸಲು ಬಯಸುತ್ತೇನೆ.  ಕನ್ನಡ ಚಿತ್ರಗಳು ನನಗೆ ಕೊಟ್ಟ ಆನಂದವನ್ನು ಓದುಗರೊಂದಿಗೆ ಹಂಚಿಕೊಳ್ಳುವ ನನ್ನ ಪುಟ್ಟ ಪ್ರಯತ್ನವಿದು.... ಎಲ್ಲಾ ಸೃಜನಶೀಲವಾದ, ಚಲನಶೀಲವಾದ ಮಾಧ್ಯಮಗಳಂತೆ ಚಿತ್ರರಂಗವೂ ಪ್ರತಿದಿನವೂ ಹೊಸ ಹೊಸ ಬದಲಾವಣೆಗಳಿಗೆ, ಸೇರ್ಪಡೆಗಳಿಗೆ, ಪ್ರಯೋಗಗಳಿಗೆ ಈಡಾಗುತ್ತಲೇ ಇರುತ್ತದೆ.  ಇಂದು ನಾಳೆಗೆ ಹಳೆಯದಾಗಿಬಿಡುವ ಇಂತಹದೊಂದು ಇತಿಹಾಸದ ತುಣುಕನ್ನು ಅಕ್ಷರ ರೂಪದಲ್ಲಿ ಹಿಡಿದಿಡುವ ಪ್ರಯತ್ನವಿದು..... ಎನ್ನುವ ಲೇಖಕರು  ಕನ್ನಡ ಚಿತ್ರರಂಗ ಅಮೃತ ಮಹೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದುರ್ಗ ಆಕಾಶವಾಣಿಯಲ್ಲಿ ಕನ್ನಡ ಚಿತ್ರರಂಗದ ಇತಿಹಾಸ ಕುರಿತು ಸಿದ್ಧಪಡಿಸಿದ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಧರಿಸಿ ಈ ಕೃತಿ ರಚಿಸಿದ್ದಾರೆ.  ಆಕಾಶವಾಣಿ ಸೇರಿದ ಮೇಲೆ ಸಾವಿರಾರು ಹೊಸ, ಹಳೆಯ ಹಾಡುಗಳನ್ನು ಪ್ರಸಾರಿಸಿ,  ಕನ್ನಡ ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರನ್ನು ಸಂದಶರ್ಿಸಿ, ಮಾತುಕತೆ ನಡೆಸಿ, ಚಿತ್ರಗೀತೆಗಳನ್ನು ಆಧರಿಸಿದ ಹತ್ತಾರು ಕಾರ್ಯಕ್ರಮಗಳನ್ನು ವಿಶೇಷ ಮಾಹಿತಿಯೊಂದಿಗೆ ಬಿತ್ತರಿಸಿದ ತಮ್ಮ ಅನುಭವವನ್ನು ಈ ಕೃತಿಯಲ್ಲಿ ತುಂಬಿಸಿದ್ದಾರೆ.
    ಸಾಹಿತ್ಯ ಮತ್ತು ಸಿನಿಮಾ ಬಗೆಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಪ್ರಸಾದ್ ಅವರು ಕಳೆದ ಇಪ್ಪತ್ತಾರು ವರ್ಷಗಳಿಂದ ಕನರ್ಾಟಕದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಹಿರಿಯ ಕಾರ್ಯಕ್ರಮ ನವರ್ಾಹಕರಾಗಿ  ಸೇವೆಸಲ್ಲಿಸುತ್ತಿದ್ದಾರೆ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿ, ಶಿವಮೊಗ್ಗ, ಚಿತ್ರದುರ್ಗ, ಮಂಗಳೂರುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು ಸಾಗರ ಭೂ ವಿಜ್ಞಾನ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.
    ಕನ್ನಡ ಸಿನಿಮಾ ಸಂಭ್ರಮವನ್ನು ಹಂಚಿಕೊಂಡ ಹಲವು ಲೇಖನಗಳು ಅಲ್ಲಲ್ಲಿ ಕಾಣಿಸಿಕೊಂಡು, ಮಿಂಚಿ, ಮರೆಯಾಗಿ ಹೋಗಿವೆ.  ಗಟ್ಟಿಯಾಗಿ ನಿಂತ ಕೆಲವೇ ಕೃತಿಗಳು ಗ್ರಂಥಾಲಯಗಳ ರ್ಯಾಕುಗಳಲ್ಲಿ ರಾರಾಜಿಸಿವೆ.  ಚುರುಮುರಿಯಂತೆ ಹಂಚಿತಿನ್ನುವ, ಚಪ್ಪರಿಸುವ ರಸಗವಳದಂತೆ ರಸನಿಮಿಷಗಳನ್ನು ಹಂಚಿಕೊಳ್ಳುವ, ಸಿನಿಮಾವೊಂದರ ಆರಂಭದಿಂದ ಕೊನೆಯವರೆಗೆ ಕುತೂಹಲವನ್ನೇ ಉಣಿಸುವಂತಹ ಅಪರೂಪದ ವಿಷಯಗಳನ್ನು ತಿಳಿಸುವ ಅಮೃತ ಸಿನಿಮಾ ಸಂಭ್ರಮ ಈಗ ಕನ್ನಡ ಸಿನಿಮಾ ರಸಿಕರ ಕೈಸೇರಿ ಬಿಸಿ ಬಿಸಿಯಾಗಿ ಚಚರ್ೆಯಾಗುತ್ತಿದೆ.  ಸಂಶೋಧನಾ ಗ್ರಂಥಕ್ಕಿಂತಲೂ ಮಿಗಿಲಾಗಿರುವ ಈ ಕಾಂತಾಸಂಹಿತ ಸಿನಿಮಾಲಾಪಕ್ಕೆ ಮುಂದೊಮ್ಮೆ ಪಠ್ಯಪುಸ್ತಕವಾಗುವ ಯೋಗ ಪ್ರಾಪ್ತವಾದರೂ ಆಗಬಹುದು.  ಇಂತಹ ಅಪರೂಪದ ಪುಸ್ತಕವನ್ನು ನೀವೂ ಓದಿ, ಆನಂದಿಸಿ.
                                                  ಪುಸ್ತಕ ಪರಿಚಯ : ಯಾಜ್ಞವಲ್ಕ್ಯ